ಆಡಳಿತ ಪಕ್ಷ ಕೆಲಸ ಮಾಡುವುದಿಲ್ಲ, ಬೇರೆಯವರಿಗೆ ಕೆಲಸ ಮಾಡಲು ಬಿಡುವುದಿಲ್ಲ : ಕಾಂಗ್ರೆಸ್ ವಿರುದ್ಧ ಪ್ರಧಾನಿ ಮೋದಿ ವಾಗ್ದಾಳಿ

ರಾಜಸ್ಥಾನ : ಇಂದು ರಾಜಸ್ಥಾನದ ದೌಸಾದಲ್ಲಿ ಪ್ರಧಾನಿ ಮೋದಿಯವರು ಮಹತ್ವಾಕಾಂಕ್ಷೆಯ ದೆಹಲಿ-ಮುಂಬೈ ಎಕ್ಸ್ಪ್ರೆಸ್ವೇಯ ಮೊದಲ ಮಾರ್ಗವನ್ನು ಅಧಿಕೃತವಾಗಿ ಉದ್ಘಾಟಿಸಿದರು.
ಉದ್ಘಾಟನೆ ಬಳಿಕ ಮಾತನಾಡಿದ ಅವರು,ರಾಜ್ಯದ ಅಭಿವೃದ್ಧಿಗೆ ಬಿಜೆಪಿ ನೇತೃತ್ವದ ಕೇಂದ್ರದ ಕೊಡುಗೆಯನ್ನು ವಿವರಿಸುತ್ತಾ, ರಾಜ್ಯದ ಆಡಳಿತ ಪಕ್ಷವಾದ ಕಾಂಗ್ರೆಸ್ ವಿರುದ್ಧ ವಾಗ್ದಾಳಿ ನಡೆಸಿ, ಗಡಿ ಗ್ರಾಮಗಳನ್ನು ಅಭಿವೃದ್ಧಿಪಡಿಸಿಲ್ಲ ಎಂದು ಆರೋಪಿಸಿದರು.
ರ್ಯಾಲಿಯನ್ನುದ್ದೇಶಿಸಿ ಮಾತನಾಡಿದ ಪ್ರಧಾನಿ ಮೋದಿ, ಇಲ್ಲಿ ಡಬಲ್ ಇಂಜಿನ್ ಆಡಳಿತವನ್ನು ಹೊಂದಿದ್ದೀರಿ ಎಂದು ಬಯಸುತ್ತೀರಿ. ಕಾಂಗ್ರೆಸ್ ಪಕ್ಷವು ಪ್ರಗತಿ ಮತ್ತು ಅಭಿವೃದ್ಧಿಯನ್ನು ವಿಳಂಬಗೊಳಿಸುತ್ತದೆ. ಕೆಲಸ ಮಾಡುವುದಿಲ್ಲ ಮತ್ತು ಬೇರೆಯವರಿಗೆ ಕೆಲಸ ಮಾಡಲು ಬಿಡುವುದಿಲ್ಲ ಎಂದು ಆರೋಪಿಸಿದರು.
ಪ್ರಧಾನಮಂತ್ರಿಯವರು ತಮ್ಮ ಭಾಷಣದ ಆರಂಭದಲ್ಲಿ, ಸ್ಥಳೀಯ ದೇವತೆಗಳನ್ನು ನೆನಪಿಸಿಕೊಂಡರು.ಭಿಲ್ವಾರಕ್ಕೆ ತಮ್ಮ ಭೇಟಿಯನ್ನು ನೆನಪಿಸಿಕೊಂಡು, ಮೀನ್ ಭಗವಾನ್ ಕಿ ಧರ್ತಿ (ಭಗವಂತ ಮೀನ ಭೂಮಿ) ಎಂದು ಕರೆದರು. ಭಗವಾನ್ ಮೀನನ್ನು ಮೀನಾಗಳು ಪೂಜಿಸುತ್ತಾರೆ, ಇದು ರಾಜ್ಯದ 13.48% ಬುಡಕಟ್ಟು ಜನಸಂಖ್ಯೆಯಲ್ಲಿ ಬಹುಪಾಲು ಹೊಂದಿರುವ ನಿರ್ಣಾಯಕ ಬುಡಕಟ್ಟು ಮತ ಬ್ಯಾಂಕ್ ಆಗಿದೆ.
ಈ ಸಂದರ್ಭದಲ್ಲಿ ಜನರನ್ನು ಅಭಿನಂದಿಸಿದ ಅವರು, ಇದು 'ವಿಕಾಸ್ ಕಾ ಉತ್ಸವ (ಅಭಿವೃದ್ಧಿಯ ಹಬ್ಬ)' ಎಂದು ಹೇಳಿದರು.
ಇದು ಕೇವಲ ಟ್ರೇಲರ್. ಚಿತ್ರ ಇನ್ನೂ ಬರಬೇಕಿದೆ. ರಾಜಸ್ಥಾನ ನನಗೆ ಪ್ರೀತಿ ಮತ್ತು ಆಶೀರ್ವಾದ ನೀಡಿದೆ. ನಾನು ಅದರ ಮುಂದೆ ತಲೆಬಾಗುತ್ತೇನೆ. ರಾಜಸ್ಥಾನವು ಧೈರ್ಯಶಾಲಿಗಳ ನಾಡು ಎಂದು ಪ್ರಧಾನಿ ಹೇಳಿದರು .
ನಮ್ಮ ದೇಶದ ಪ್ರಗತಿಗೆ, ನಮಗೆ ಆಧುನಿಕ ಮೂಲಸೌಕರ್ಯ ಮತ್ತು ಉತ್ತಮ ಸಂಪರ್ಕದ ಅಗತ್ಯವಿದೆ. ನಾವು ರಸ್ತೆ, ರೈಲುಗಳ ಮೇಲೆ ಕೇಂದ್ರೀಕರಿಸಿದ್ದೇವೆ. ನಮ್ಮ ಗಮನವು ಗಾಂವ್, ಗರೀಬ್, ಔರ್ ಮಧ್ಯಮ ವರ್ಗ (ಗ್ರಾಮಗಳು, ಬಡವರು ಮತ್ತು ಮಧ್ಯಮ ವರ್ಗ) ಮೇಲೆ ಕೇಂದ್ರೀಕರಿಸಿದೆ ಎಂದು ಅವರು ಹೇಳಿದರು.