ಸರ್ವೆ ವರದಿ ತಂದಿಟ್ಟ ಸಂಕಷ್ಟ : ಕಾಂಗ್ರೆಸ್ ನ ಹಾಲಿ 7 ಶಾಸಕರಿಗೆ ಟಿಕೆಟ್ ಡೌಟ್?

ಸರ್ವೆ ವರದಿ ತಂದಿಟ್ಟ ಸಂಕಷ್ಟ : ಕಾಂಗ್ರೆಸ್ ನ ಹಾಲಿ 7 ಶಾಸಕರಿಗೆ ಟಿಕೆಟ್ ಡೌಟ್?

ವದೆಹಲಿ: ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ನೇತೃತ್ವದಲ್ಲಿ ಕಾಂಗ್ರೆಸ್​ನ ಕೇಂದ್ರ ಚುನಾವಣಾ ಸಮಿತಿ ಸಭೆ ನಡೆದಿದ್ದು, 125 ಅಭ್ಯರ್ಥಿಗಳ ಹೆಸರು ಅಂತಿಮಗೊಳಿಸಲಾಗಿದೆ.

ಸುಮಾರು 3 ಗಂಟೆಗಳ ಕಾಲ ನಡೆದ ಸಭೆಯಲ್ಲಿ 125 ಕ್ಷೇತ್ರಗಳ ಅಭ್ಯರ್ಥಿಗಳ ಬಗ್ಗೆ ಅಂತಿಮ ತೀರ್ಮಾನ ತೆಗೆದುಕೊಳ್ಳಲಾಗಿದೆ.

71 ಮಂದಿ ಹಾಲಿ ಶಾಸಕರಿಗೆ ಮತ್ತೆ ಟಿಕೆಟ್​ ನೀಡಲು ಸಭೆಯಲ್ಲಿ ನಿರ್ಧರಿಸಲಾಗಿದೆ. ಯುಗಾದಿ ಹಬ್ಬದ ನಂತರ ಪಟ್ಟಿ ಬಿಡುಗಡೆ ಮಾಡಲು ಕಾಂಗ್ರೆಸ್ ನಾಯಕರು ನಿರ್ಧರಿಸಿದ್ದಾರೆ. ರಾಜ್ಯ ಘಟಕದ ನಾಯಕರ ಸಲಹೆ ಮೇರೆಗೆ ಕಾಂಗ್ರೆಸ್ ಹೈಕಮಾಂಡ್ ಈ ನಿರ್ಧಾರ ಕೈಗೊಂಡಿದೆ. ಹಾಲಿ ಶಾಸಕರ ಜತೆ ಕಳೆದ ಬಾರಿ ಕಡಿಮೆ ಅಂತದಲ್ಲಿ ಸೋತವರಿಗೂ ಟಿಕೆಟ್​ ನೀಡಲು ತೀರ್ಮಾನ ಕೈಗೊಳ್ಳಲಾಗಿದೆ. ಕರ್ನಾಟಕ ವಿಧಾನಸಭೆ ಚುನಾವಣೆಗೆ ಸರ್ವೆ ನಡೆಸಿರುವ ಕಾಂಗ್ರೆಸ್, ಕ್ಷೇತ್ರದ ಸರ್ವೆ ವರದಿ ನೆಗೆಟಿವ್ ಹಿನ್ನೆಲೆಯಲ್ಲಿ ಕಾಂಗ್ರೆಸ್ ನ 7 ಶಾಸಕರಿಗೆ ಟಿಕೆಟ್ ನೀಡದೇ ಇರಲು ನಿರ್ಧರಿಸಲಾಗಿದೆ ಎನ್ನಲಾಗಿದೆ.

ಯಾವ ಶಾಸಕರಿಗೆ ಟಿಕೆಟ್ ಇಲ್ಲ?

ಹರಿಹರದ ಶಾಸಕ ಎಸ್. ರಾಮಪ್ಪ

ಲಿಂಗಸಗೂರು ಶಾಸಕ ಹೊಲಗೇರಿ

ಕಲಬುರಗಿ ನಗರ ಶಾಸಕಿ ಖನೀಜ್ ಫಾತಿಮಾ

ಅಫಜಲ್ ಪುರ ಶಾಸಕ ಎಂ.ವೈ. ಪಾಟೀಲ್

ಶಿಡ್ಲಘಟ್ಟ ಶಾಸಕ ವಿ.ಮುನಿಯಪ್ಪ

ಪಾವಗಡ ಶಾಸಕ ವೆಂಕಟರಮಣಪ್ಪ

ಕುಂದಗೋಳ ಶಾಸಕಿ ಕುಸುಮಾ ಶಿವಳ್ಳಿ