ಹೈಕಮಾಂಡ್ ನಿರ್ಧಾರದಂತೆ ಸಿಎಂ ಆಯ್ಕೆ : ಸಚಿವ ಆರ್. ಅಶೋಕ್

ಹೈಕಮಾಂಡ್ ನಿರ್ಧಾರದಂತೆ ಸಿಎಂ ಆಯ್ಕೆ : ಸಚಿವ ಆರ್. ಅಶೋಕ್

ಬೆಂಗಳೂರು : ಬಿಜೆಪಿಯಲ್ಲಿ ಮುಖ್ಯಮಂತ್ರಿ ಯಾರೆಂಬುದು ಹೈ ಕಮಾಂಡ್ ನಿರ್ಧಾರ ಮಾಡಲಿದೆ ಎಂದು ಕಂದಾಯ ಸಚಿವ ಆರ್. ಅಶೋಕ್ ಹೇಳಿದರು.

ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಬಿಜೆಪಿಯಲ್ಲಿ ಮುಖ್ಯಮಂತ್ರಿ ಯಾರೆಂಬುದು ಹೈ ಕಮಾಂಡ್ ನಿರ್ಧಾರ ಮಾಡಲಿದೆ.

ನಮ್ಮದು ರಾಷ್ಟ್ರೀಯ ಪಕ್ಷ.ದೇಶದಲ್ಲಿ‌ ಇರುವ 130 ಕೋಟಿ ಜನರ ಪೈಕಿ ಯಾರು ಬೇಕಾದರೂ ಸಿಎಂ ಆಗಬಹುದು‌ ಯಾರು ಬೇಕಾದರೂ ಪ್ರಧಾನಿ ಆಗಬಹುದು ಎಂದರು.

ಹೆಚ್.ಡಿ.ಕುಮಾರಸ್ವಾಮಿ ಅವರದ್ದು ಕುಟುಂಬದ ಪಕ್ಷ.‌ ಜೆಡಿಎಸ್ ಏನು ತೀರ್ಮಾನ ಆಗಬೇಕಾದರೂ‌ ಅವರ ಮನೆಯಲ್ಲೇ ಆಗಬೇಕು. ಸಿಎಂ ಆಗಬೇಕಾದರೂ ಉಪ ಸಿಎಂ ಆಗಬೇಕಾದರೂ ಮನೆಯವರೇ.ಅವರದ್ದು ಈ ಪರಂಪರೆ. ಡಿಎಂಕೆ ಹಾಗೂ ಲಾಲು ಪ್ರಸಾದ್ ಯಾದವ್ ಅವರದ್ದೂ ಕೂಡಾ ಇದೇ ರೀತಿಯಾದ ಕುಟುಂಬ ಪಕ್ಷ ಎಂದು ವಾಗ್ದಾಳಿ ನಡೆಸಿದ್ದಾರೆ.