ಜೈಲಿನಿಂದ ಬಂದ ಮಹಾಂತೇಶ್ ಪಾಟೀಲ್​ಗೆ ಕಾಂಗ್ರೆಸ್ ನಾಯಕರಿಂದ ಸತ್ಕಾರ

ಜೈಲಿನಿಂದ ಬಂದ ಮಹಾಂತೇಶ್ ಪಾಟೀಲ್​ಗೆ ಕಾಂಗ್ರೆಸ್ ನಾಯಕರಿಂದ ಸತ್ಕಾರ

ಕಲಬುರಗಿ: 545 PSI ಹುದ್ದೆಗಳ ನೇಮಕಾತಿ ಪರೀಕ್ಷೆಯಲ್ಲಿ ಅಕ್ರಮ ಪ್ರಕರಣದ ಆರೋಪಿ ಮಹಾಂತೇಶ್ ಪಾಟೀಲ್​ಗೆ ಜಾಮೀನು ಸಿಕ್ಕಿದೆ. 'ಕೈ' ಮುಖಂಡ ಮಹಾಂತೇಶ್ ನಿನ್ನೆ(ಡಿ.17) ಜೈಲಿನಿಂದ ಮನೆಗೆ ಬಂದಿದ್ದಾರೆ. ಈ ಹಿನ್ನೆಲೆ ಕೆಲ ಕಾಂಗ್ರೆಸ್ ಮುಖಂಡರು ಮಹಾಂತೇಶ್ ನಿವಾಸಕ್ಕೆ ಭೇಟಿ ನೀಡಿ ಅವರೊಂದಿಗೆ ಚರ್ಚೆ ನಡೆಸಿದ್ದಾರೆ. ಮತ್ತೊಂದೆಡೆ ಜಾಮೀನಿನ ಮೇಲೆ ಹೊರಗೆ ಬರ್ತಿದ್ದಂತೆ ಮಹಾಂತೇಶ್​ಗೆ ಅತಿಥಿ ಸತ್ಕಾರ ನಡೆದಿದೆ. ಮಾಜಿ MLC ಅಲ್ಲಮಪ್ರಭು ಪಾಟೀಲ್ ಸೇರಿ ಅನೇಕರು ಮಹಾಂತೇಶ್ ಪಾಟೀಲ್​ಗೆ ಸತ್ಕಾರ ಮಾಡಿ ಜೈಲಿನಿಂದ ಹೊರ ಬಂದಿದ್ದಕ್ಕೆ ಸಂಭ್ರಮಾಚರಣೆ ಮಾಡಿದ್ದಾರೆ.