ಇನ್ನಷ್ಟು ಮಂದಿಗೆ ಮರಳು ಪರ್ಮಿಟ್‌; ನಾಳೆ ಜಿಲ್ಲಾಧಿಕಾರಿ ಸಭೆ

ಇನ್ನಷ್ಟು ಮಂದಿಗೆ ಮರಳು ಪರ್ಮಿಟ್‌; ನಾಳೆ ಜಿಲ್ಲಾಧಿಕಾರಿ ಸಭೆ

ಮಂಗಳೂರು: ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಮರಳು ಕೊರತೆ ವಿಚಾರವಾಗಿ ನ. 14ರಂದು ಜಿಲ್ಲೆಯ 7 ಸದಸ್ಯರ ಸಮಿತಿಯ ಸಭೆ ಯನ್ನು ಕರೆಯಲಾಗಿದ್ದು, ಚರ್ಚಿಸಿ ನಿರ್ಧಾರ ಕೈಗೊಳ್ಳಲಾಗುವುದು ಎಂದು ನೂತನ ಜಿಲ್ಲಾಧಿಕಾರಿ ರವಿಕುಮಾರ್‌ ಎಂ.ಆರ್‌. ಪತ್ರಿಕಾಗೋಷ್ಠಿಯಲ್ಲಿ ತಿಳಿಸಿದ್ದಾರೆ.

ಮರಳಿನ ಸಮಸ್ಯೆ ಬಗ್ಗೆ ತಿಳಿದು ಕೊಳ್ಳುತ್ತಿದ್ದೇನೆ. ಈ ಬಗ್ಗೆ ಒಂದು ಹಂತ ದಲ್ಲಿ ಬೆಂಗಳೂರಿನಲ್ಲಿ ಸದನ ಸಮಿತಿ ಮಟ್ಟದಲ್ಲಿ ಸಭೆ ಕೂಡ ನಡೆಸಲಾಗಿದ್ದು ಸಮಸ್ಯೆಗಳ ಬಗ್ಗೆ ಚರ್ಚೆ ನಡೆದಿದೆ. ಇಲ್ಲಿ ನಡೆ ಯುವ ಕಾನೂನು ಸಮ್ಮತ
ವಾದ ಹಾಗೂ ಕಾನೂನುಬಾಹಿರ ಎರಡೂ ಮರಳುಗಾರಿಕೆ ಪ್ರಸ್ತಾಪ ಆಗಿದೆ. ಕಾನೂನು ಸಮ್ಮತವಾದ ಮರಳುಗಾರಿಕೆ ಸರಿಯಾಗಿ ಆದರೆ ಕಾನೂನು ಬಾಹಿರ ಮರಳುಗಾರಿಕೆ ಕಡಿಮೆ ಯಾಗಬಹುದು. ಈ ನಿಟ್ಟಿ ನಲ್ಲಿ ನ. 14ರಂದು ಸಭೆ ನಡೆಸಲಾಗುತ್ತಿದೆ ಎಂದರು.

ಉಡುಪಿ ಜಿಲ್ಲೆಗೆ ಸಂಬಂಧಿಸಿ ದಂತೆ ರಾಷ್ಟ್ರೀಯ ಹಸುರು ನ್ಯಾಯಾ ಧಿಕರಣದ ಚೆನ್ನೈ ಪೀಠ ಸಿಆರ್‌ಝಡ್‌ ವ್ಯಾಪ್ತಿಯಲ್ಲಿ ಮರಳುಗಾರಿಕೆ ನಿಷೇಧ ಮಾಡಿತ್ತು. ಅದನ್ನು ನಮ್ಮ ಜಿಲ್ಲೆಗೂ ಅನ್ವಯಿಸಿರುವ ದ.ಕ. ಜಿಲ್ಲಾಡಳಿತದ ನಿರ್ಣಯ ವನ್ನು ಕೆಲವು ಮರಳುಗುತ್ತಿಗೆದಾರರು ಪ್ರಶ್ನಿಸಿ ಹೈಕೋರ್ಟ್‌ ಮೆಟ್ಟಿಲೇರಿದ್ದು,
ಅಲ್ಲಿ ಜಿಲ್ಲಾಡಳಿತದ ನಿರ್ಣಯ ವನ್ನು ತಿರಸ್ಕರಿಸಲಾಗಿದೆ. ಇದಕ್ಕೆ ಮೇಲ್ಮನವಿ ಸಲ್ಲಿಸುವ ಇರಾದೆ ಇಲ್ಲ. ಜಿಲ್ಲೆಯಲ್ಲಿ ನ್ಯಾಯಯುತವಾಗಿ ಪಾರಂಪರಿಕವಾಗಿ ಮರಳು ತೆಗೆಯುವವರಿಗೆ ಅವಕಾಶ ನೀಡುವ ಬಗ್ಗೆ ಸಭೆಯಲ್ಲಿ ಚರ್ಚಿಸುತ್ತೇವೆ ಎಂದು ತಿಳಿಸಿದರು.

ಎನ್‌ಐಟಿಕೆ ಟೋಲ್‌ಗೇಟ್‌ ರದ್ದು ಮಾಡುವ ಕುರಿತು ಈಗಾಗಲೇ ಸಂಸದರು ಕೇಂದ್ರ ಭೂಸಾರಿಗೆ ಸಚಿವರಿಗೆ ಒತ್ತಾಯ ಮಾಡಿದ್ದಾರೆ. ಶೀಘ್ರ ಈ ಕುರಿತು ಅಂತಿಮ ಅಧಿಸೂಚನೆ ಬರುವ ನಿರೀಕ್ಷೆ ಇದೆ ಎಂದೂ ಡಿಸಿ ಹೇಳಿದರು.