ಅದಾನಿ ವಿವಾದ ; ಹೂಡಿಕೆದಾರರ ರಕ್ಷಣೆಗೆ 'ಸಮಿತಿ' ರಚಿಸಲು ಕೇಂದ್ರ ಸರ್ಕಾರ ಗ್ರೀನ್ ಸಿಗ್ನಲ್

ನವದೆಹಲಿ : ಸುಪ್ರೀಂ ಕೋರ್ಟ್ ಅದಾನಿ-ಹಿಂಡೆನ್ಬರ್ಗ್ ಪ್ರಕರಣವನ್ನು ಫೆಬ್ರವರಿ 17 ರಂದು ವಿಚಾರಣೆ ನಡೆಸಲಿದೆ. ಸೋಮವಾರ (ಫೆಬ್ರವರಿ 13) ನಡೆದ ವಿಚಾರಣೆಯ ಸಂದರ್ಭದಲ್ಲಿ, ಷೇರು ಮಾರುಕಟ್ಟೆಯ ಉತ್ತಮ ಕಾರ್ಯನಿರ್ವಹಣೆಗಾಗಿ ಸಮಿತಿಯನ್ನು ರಚಿಸುವುದಕ್ಕೆ ನಮ್ಮ ಅಭ್ಯಂತರವಿಲ್ಲ ಎಂದು ಕೇಂದ್ರವು ಸುಪ್ರೀಂಕೋರ್ಟ್ಗೆ ತಿಳಿಸಿದೆ.
ಸಮಿತಿಯ ಸದಸ್ಯರಿಗೆ ಮುಚ್ಚಿದ ಕವರ್ನಲ್ಲಿ ತನ್ನ ಸಲಹೆಗಳನ್ನು ಸಲ್ಲಿಸಲು ನ್ಯಾಯಾಲಯವು ಕೇಂದ್ರಕ್ಕೆ ಅವಕಾಶ ನೀಡಿತು. ಕಳೆದ ವಿಚಾರಣೆಯಲ್ಲಿ ಹೂಡಿಕೆದಾರರ ಹಣ ಮುಳುಗಡೆಯಾಗುತ್ತಿರುವ ಬಗ್ಗೆ ನ್ಯಾಯಾಲಯ ಕಳವಳ ವ್ಯಕ್ತಪಡಿಸಿತ್ತು. ಭವಿಷ್ಯದಲ್ಲಿ ಇಂತಹ ನಷ್ಟದಿಂದ ಜನರನ್ನ ಪಾರು ಮಾಡಲು ವ್ಯವಸ್ಥೆಯನ್ನ ಸುಧಾರಿಸುವ ಅಗತ್ಯವನ್ನ ನ್ಯಾಯಾಲಯ ಹೇಳಿತ್ತು.
ಮುಖ್ಯ ನ್ಯಾಯಮೂರ್ತಿ ಡಿ.ವೈ.ಚಂದ್ರಚೂಡ್, ನ್ಯಾಯಮೂರ್ತಿ ಪಿ.ಎಸ್.ನರಸಿಂಹ ಮತ್ತು ಸುಪ್ರೀಂ ಕೋರ್ಟ್ನ ಜೆ.ಬಿ.ಪರ್ಡಿವಾಲಾ ಅವರ ನ್ಯಾಯಪೀಠದಲ್ಲಿ ಫೆಬ್ರವರಿ 10 ರಂದು ಅದಾನಿ-ಹಿಂಡಾನ್ಬರ್ಗ್ ಪ್ರಕರಣದ ವಿಚಾರಣೆ ನಡೆದಿತ್ತು. ಈ ಸಮಯದಲ್ಲಿ, ಸಲಹೆಗಳನ್ನು ನೀಡಲು ತಜ್ಞರ ಸಮಿತಿಯನ್ನ ರಚಿಸಬಹುದು ಎಂದು ನ್ಯಾಯಾಲಯ ಸೂಚಿಸಿತ್ತು.