ನಮ್ಮ ಬಿಜೆಪಿ ಸರ್ಕಾರ ಒಂದ ರೀತಿಯಲ್ಲಿ ಸಮ್ಮಿಶ್ರ ಸರ್ಕಾರ ಇದ್ದ ಹಾಗೇ,ಶಾಸಕ ರಾಜುಗೌಡ
ನಮ್ಮದು ಒಂದ ಥರಾ ಸಮ್ಮಿಶ್ರ ಸರ್ಕಾರ ಇದ್ದ ಹಾಗೆ. ನಾನು ಈಗ ಸಚಿವ ಸ್ಥಾನದ ಆಕಾಂಕ್ಷಿ ಇಲ್ಲ. ಅವಗಲ್ಲೇ 29 ಸ್ಥಾನ ಇದ್ದಾಗಲೇ ನಮಗೆ ಸಚಿವ ಸ್ಥಾನ ಸಿಕ್ಕಿಲ್ಲ, ಈಗ ಆಶೆ ಪಡುವುದು ತಪ್ಪು ಎಂದು ಶಾಸಕ ರಾಜುಗೌಡ ಹೇಳಿದ್ರು. ಧಾರವಾಡದಲ್ಲಿ ಮಾತನಾಡಿದ ಅವರು, ನಾನು ಈ ಹಿಂದಿನಿಂದಲೂ ಸಚಿವ ಸ್ಥಾನದ ಆಕಾಂಕ್ಷೆ ಅಲ್ಲಾ. ಅಗಿನ ಸಮಯದಲ್ಲಿ ಸಚಿವ ಸ್ಥಾನ ಸಿಕ್ಕಿಲ್ಲ, ಈಗ ಆಗುವ ಆಶೆಯೂ ನನಗೆ ಇಲ್ಲವೇ ಇಲ್ಲ. ಈಗ ಉಳಿದಿರೋ ನಾಲ್ಕು ಸ್ಥಾನಗಳಲ್ಲಿ ನನಗೆ ಸಚಿವ ಸಿಗುತ್ತೆ ಅಂತಾ ಆಸೆ ಪಡೋದು ತಪ್ಪು, ಮುಂದೆ ಪಕ್ಷ ಗುರುತಿಸಿ ಕೊಡುವವರೆಗೂ ನಾನು ಕಾಯುತ್ತೇನೆ. ಸದ್ಯದ ಬಿಜೆಪಿ ಸರ್ಕಾರ ಒಂದು ರೀತಿ ರ ಸಮ್ಮಿಶ್ರ ಸರ್ಕಾರ ಇದ್ದಂಥೆ. ಸಂಪೂರ್ಣವಾಗಿ 113 ಶಾಸಕು ಮೊದಲೇ ಗೆದ್ದು ಬಂದಿದ್ದರೆ, ನಾವು ಮಂತ್ರಿ ಆಗತಿದ್ವಿ ಅದ್ರಲ್ಲಿ ಎರಡು ಮಾತಿಲ್ಲ, ಆದ್ರೆ, ನಮಗೆ 104-105 ಸ್ಥಾನ ದಕ್ಕಿತ್ತು. ಹೀಗಾಗಿ ಒಂದು ರೀತಿ ಸಮ್ಮಿಶ್ರ ಸರ್ಕಾರ ಇದ್ದಂತೆ ಆಗಿದೆ. ಹೀಗಾಗಿ ಪಕ್ಷಕ್ಕೆ ಬಂದವರಿಗೆಲ್ಲ ಕೊಡಬೇಕಾಗಿದೆ, ರಾಮುಲು ಅವರಿಗೆ ನಮ್ಮ ಸಮಾಜದ ಪರ ಸಚಿವ ಸ್ಥಾನ ಕೊಟ್ಟಿದ್ದಾರೆ. ರಮೇಶ ಜಾರಕಿಹೊಳಿಯವರಿಗೆ ಕೊಡಬೇಕಿತ್ತು, ಆದರೆ ಅವರ ಬದಲಿ ಯಾರಿಗೂ ಸಿಕ್ಕಿಲ್ಲ.17 ಜನ ಹೊರಗಿನಿಂದ ಬಂದಿದ್ದಕ್ಕೆ ನಮ್ಮ ಸರ್ಕಾರ ಸರಕಾರ ಆಗಿದೆ. ಜೆಡಿಎಸ್ನ 3, ಕಾಂಗ್ರೆಸ್ನಿಂದ 14 ಜನ ಬಂದಿದ್ದಾರೆ, ನಾನು ಸಮ್ಮಿಶ್ರ ಸರ್ಕಾರ ರೀತಿ ಅಂತ ಮಾತ್ರ ಹೇಳುತ್ತಿದ್ದೇನೆ. ಒಂದು ರೀತಿ ಅಂತ ಮಾತ್ರ ಹೇಳುತ್ತಿದ್ದೇನೆ, ಸಂಪೂರ್ಣ ಸಮ್ಮಿಶ್ರ ಸರ್ಕಾರ ಅಂತಲ್ಲ, ವಿವಾದ ಬೇಡ ಎಂದು ಅವರು ಹೇಳಿದ್ರು