ಬೆಂಗಳೂರು:ರಾಜ್ಯದಲ್ಲಿ ಎನ್ಪಿಎಸ್ ಸರ್ಕಾರಿ ನೌಕರರು ಎನ್ಪಿಎಸ್ ನ್ನು ರದ್ದು ಮಾಡಬೇಕು ಎಂದು ಹೋರಾಟ ನಡೆಸ್ತಿದ್ದಾರೆ. ಈ ನಡುವೆ ರಾಜ್ಯ ಸರ್ಕಾರಿ ನೌಕರರ ಸಂಘದ ರಾಜ್ಯಾಧ್ಯಕ್ಷ ಸಿಎಸ್ ಷಡಾಕ್ಷರಿಯವರ ಹೇಳಿಕೆ ಸಾಕಷ್ಟು ವೈರಲ್ ಆಗಿತ್ತು.
ಅಲ್ಲದೆ ಗೊಂದಲ ಮೂಡಿಸಿತ್ತು. ಸದ್ಯ ಈ ನಿಟ್ಟಿನಲ್ಲಿ ಸಂಘ ಹೋರಾಟಕ್ಕೆ ಸಿದ್ಧವಿದೆ ಎಂದು ರಾಜ್ಯಾಧ್ಯಕ್ಷ ಸಿಎಸ್ ಷಡಾಕ್ಷರಿ ತಿಳಿಸಿದ್ದಾರೆ. ಶಿವಮೊಗ್ಗದಲ್ಲಿ ಮಾತನಾಡಿದ ಅವರು, ಸಂಘ ಈ ನಿಟ್ಟಿನಲ್ಲಿ ನಿರ್ಣಾಯಕವಾದ ಹೋರಾಟ ನಡೆಸಲಿದೆ. ಮುಂದಿನ ಏಪ್ರಿಲ್ ನಂತರ ಈ ಸಂಬಂಧ ಹೋರಾಟ ಕೈಗೆತ್ತಿಕೊಳ್ಳುವುದಾಗಿ ತಿಳಿಸಿದ್ದಾರೆ.