ಮೋದಿ ಎದುರಲ್ಲಿ ನೇತಾಜಿ ಕುರಿತು ಭಾಷಣಕ್ಕೆ ರಾಜ್ಯದ ಪರೇಶ ಆಯ್ಕೆ

ಬಾಗಲಕೋಟೆ: ನಗರದ ವಿದ್ಯಾರ್ಥಿಯೊಬ್ಬ ಪ್ರಧಾನಿ ನರೇಂದ್ರ ಮೋದಿ ಎದುರಲ್ಲಿ ನೇತಾಜಿ ಸುಭಾಶ್ಚಂದ್ರ ಬೋಸ್ ಕುರಿತು ಭಾಷಣ ಮಾಡಲು ಆಯ್ಕೆಯಾಗಿದ್ದಾನೆ.
ಪ್ರತಿಷ್ಠಿತ ಬಸವೇಶ್ವರ ವಿದ್ಯಾವರ್ಧಕ ಸಂಘದ ಬಸವೇಶ್ವರ ವಾಣಿಜ್ಯ ಕಾಲೇಜಿನಲ್ಲಿ ಬಿಬಿಎ 3ನೇ ಸೆಮಿಸ್ಟರ್ನ ಲ್ಲಿ ಅಧ್ಯಯನ ಮಾಡುತ್ತಿರುವ ಪರೇಶ ಸಚಿನಕುಮಾರ ಗುಂಡೇಚಾ ಈ ಹೆಮ್ಮೆಗೆ ಪಾತ್ರನಾಗಿದ್ದಾನೆ.
ಪ್ರಧಾನಿ ಮೋದಿ ಅವರನ್ನು ನೋಡುವುದೇ ದೊಡ್ಡ ಸೌಭಾಗ್ಯ. ಅದರಲ್ಲೂ ಅವರ ಎದುರು ಮೂರು ನಿಮಿಷ ಭಾಷಣ ಮಾಡಲು ಅವಕಾಶ ಸಿಕ್ಕಿರುವುದರಿಂದ ಬಹಳ ಖುಷಿಯಾಗಿದೆ. ಇದಕ್ಕೆ ತಂದೆ-ತಾಯಿ, ಕಾಲೇಜು ಪ್ರಾಧ್ಯಾಪಕರು, ಸಂಘದ ಆಡಳಿತ ಮಂಡಳಿಯ ಪ್ರತಿಯೊಬ್ಬರ ಹಾರೈಕೆಯೂ ಕಾರಣ.
-ಪರೇಶ ಸಚಿನಕುಮಾರ ಗುಂಡೇಚಾ