ಸಿದ್ದರಾಮಯ್ಯಗೆ ಹಣ ನೀಡಿದ ಬೆನ್ನಲ್ಲೇ ನಿಖಿಲ್ ಗೂ 5 ಸಾವಿರ ದೇಣಿಗೆ ನೀಡಿದ ಮಕ್ಕಳು

ಸಿದ್ದರಾಮಯ್ಯಗೆ ಹಣ ನೀಡಿದ ಬೆನ್ನಲ್ಲೇ ನಿಖಿಲ್ ಗೂ 5 ಸಾವಿರ ದೇಣಿಗೆ ನೀಡಿದ ಮಕ್ಕಳು

ವಿಜಯಪುರ : ಮಾಜಿ ಸಿಎಂ ಸಿದ್ದರಾಮಯ್ಯರ ಚುನಾವಣಾ ವೆಚ್ಚಕ್ಕಾಗಿ ಬಾಲಕಿಯೊಬ್ಬಳು ತನ್ನ 5000 ರೂ,ಉಳಿತಾಯದ ಹಣ ನೀಡಿದ ಘಟನೆ ಪ್ರಜಾಧ್ವನಿ ಕಾರ್ಯಕ್ರಮದಲ್ಲಿ ನಡೆದಿತ್ತು.

ಇದೀಗ ಜೆಡಿಎಸ್ ಯುವ ಘಟಕ ರಾಜ್ಯಾಧ್ಯಕ್ಷ ನಿಖಿಲ್ ಕುಮಾರಸ್ವಾಮಿ ಅವರಿಗೆ, ಪಕ್ಷಕ್ಕೆ ದೇಣಿಗೆಯೆಂದು ಮಕ್ಕಳು 5000 ರೂ.

ನೀಡಿದ್ದಾರೆ. ಇಂದು ಕೋಲಾರ ತಾಲೂಕಿನ ವೇಮಗಲ್ ಹೋಬಳಿ ತಿಪ್ಪೇನಹಳ್ಳಿ ಗ್ರಾಮದಲ್ಲಿ ಜೆಡಿಎಸ್ ಸಮಾವೇಶದಲ್ಲಿ ಅಮ್ಮನಲ್ಲೂರು ಗ್ರಾಮದ ಮೋನ ಮತ್ತು ಸಹನಾ ಎಂಬ ಮಕ್ಕಳು, ನಿಖಿಲ್ ಕುಮಾರಸ್ವಾಮಿ ಅವರಿಗೆ, ಪಕ್ಷಕ್ಕೆ ದೇಣಿಗೆಯೆಂದು ಮಕ್ಕಳು 5000 ರೂ. ನೀಡಿದ್ದಾರೆ.ಬಳಿಕ ಹಣವನ್ನು ಮಕ್ಕಳಿಗೆ ವಾಪಸ್ ನೀಡಲಾಗಿದೆ ಎನ್ನಲಾಗಿದೆ.

ವಿಜಯಪುರ ಜಿಲ್ಲೆಯ ಸಿಂಧಗಿ ಪಟ್ಟಣದಲ್ಲಿ ನಡೆದ ಪ್ರಜಾಧ್ವನಿ ಯಾತ್ರೆ ಹಾಗೂ ಸಮಾವೇಶಕ್ಕೆ ಆಗಮಿಸಿದ ಸಿದ್ದರಾಮಯ್ಯ ಅವರನ್ನು ಭೇಟಿ ಮಾಡಿದ ಬಾಲಕಿ ಜಿಯಾ ರಫೀಕ್ ಮಣಲೂರು 5000 ಸಾವಿರ ರೂ ನೀಡಿ ಗಮನ ಸೆಳೆದಿದ್ದರು. ನಂತರ ಸಿದ್ದರಾಮಯ್ಯ ಕೂಡ ಹಣವನ್ನು ಮಕ್ಕಳಿಗೆ ವಾಪಸ್ ನೀಡಿದ್ದರು. ಇದೀಗ ಜೆಡಿಎಸ್ ಸಮಾವೇಶದಲ್ಲೂ ಮಕ್ಕಳು ಹಣ ನೀಡಿದ್ದಾರೆ.