ಕಬ್ಬಿನ ಗದ್ದೆಗೆ ಬೆಂಕಿ : ಬೆಂಕಿ ನಂದಿಸುತ್ತಲೇ ಸುಟ್ಟು ಕರಕಲಾದ ರೈತ

ಕಬ್ಬಿನ ಗದ್ದೆಗೆ ಬೆಂಕಿ : ಬೆಂಕಿ ನಂದಿಸುತ್ತಲೇ ಸುಟ್ಟು ಕರಕಲಾದ ರೈತ

ಮಂಡ್ಯ: ಕಬ್ಬಿನ ಗದ್ದೆಗೆ ಬೆಂಕಿ ಬಿದ್ದಿರುವುದನ್ನು ನೋಡಿದ ರೈತರನೊಬ್ಬ ಬೆಂಕಿಯನನ್ನು ನಂದಿಸಲು ಹೋಗಿ ಜಮೀನಲ್ಲೇ ಸುಟ್ಟು ಕರಕಲಾಗಿರುವ ಘಟನೆ ಮಂಡ್ಯದಲ್ಲಿ ನಡೆದಿದೆ.

ಮಂಡ್ಯ ತಾಲೂಕಿನ ಮೊಡಚಾಕನಹಳ್ಳಿ ಗ್ರಾಮದಲ್ಲಿ ಇಂದು ಮಧ್ಯಾಹ್ನ 1 ಗಂಟೆ ಸುಮಾರಿಗೆ ಈ ಬೆಂಕಿ ಆಕಸ್ಮಿಕ ಸಂಭವಿಸಿದೆ.

ಮಹಾಲಿಂಗಯ್ಯ (60) ಬೆಂಕಿ ನಂದಿಸಲು ಹೋಗಿ ಸಾವನ್ನಪ್ಪಿದ್ದಾನೆ. ಈ ಸಂದರ್ಭದಲ್ಲಿ ಮಹಾಲಿಂಗಯ್ಯ ಸಜೀವ ದಹನಗೊಂಡು ಅಲ್ಲೇ ಸಾವನ್ನಪ್ಪಿದ್ದು, ಅವಘಡದಲ್ಲಿ ಮಹಾಲಿಂಗಯ್ಯ ದೇಹ ಸುಟ್ಟು ಭಸ್ಮಮವಾಗಿದೆ. ಘಟನೆ ಬಗ್ಗೆ ಶಿವಳ್ಳಿ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಪ್ರಕರರಣ ದಾಖಲಾಗಿದೆ.