ಬಂಗಾಳಕೊಲ್ಲಿಯಲ್ಲಿ ವಾಯುಭಾರ ಕುಸಿತ; ಬೀದರ್ ನಲ್ಲಿ ಜನರಿಗೆ ಹೆಚ್ಚಾದ ಅನಾರೋಗ್ಯದ ಸಮಸ್ಯೆ

ಬೀದರ್: ಬಂಗಾಳಕೊಲ್ಲಿಯಲ್ಲಿ ವಾಯುಭಾರ ಕುಸಿತದಿಂದ ಮಾಂಡೌಸ್ ಚಂಡಮಾರುತ ಅಪ್ಪಳಿಸಿದೆ. ಈ ಪರಿಣಾಮವಾಗಿ ರಾಜ್ಯದಲ್ಲಿ ಜಿಟಿ ಜಿಟಿ ಮಳೆ ಶುರುವಾಗಿದೆ.
ಇನ್ನು ಕೆಲವು ಕಡೆ ಮೋಡಕವಿದ ವಾತವರಣ ಸೃಷ್ಟಿಯಾಗಿದೆ. ಕಳೆದ ಎರಡು- ಮೂರು ದಿನಗಳಿಂದ ವಾತವರಣದಲ್ಲಿ ಏರುಪೇರು ಆಗಿದ್ದು, ಆರೋಗ್ಯದಲ್ಲಿ ವ್ಯತ್ಯಾಸ ಕಾಣುತ್ತಿದೆ.ಅಷ್ಟೇ ಅಲ್ಲದೆ ಅನಾರೋಗ್ಯ ಸಮಸ್ಯೆ ಕಾಡಲು ಆರಂಭವಾಗಿದೆ. ಮಕ್ಕಳು, ವಯಸ್ಕರು ಕೆಮ್ಮು, ನೆಗಡಿಯಂತಹ ಅನಾರೋಗ್ಯಕ್ಕೆ ತುತ್ತಾಗುತ್ತಿದ್ದು, ಬ್ರಿಮ್ಸ್ ಆಸ್ಪತ್ರೆಗೆ ಒಂದೂವರೆ ಸಾವಿರಕ್ಕೂ ಅಧಿಕ ರೋಗಿಗಳು ಬರುತ್ತಿದ್ದಾರೆ.
ಆ ಮೂಲಕ ಬ್ರೀಮ್ಸ್ ಆಸ್ಪತ್ರೆಗೆ ಬರುವ ರೋಗಿಗಳ ಸಂಖ್ಯೆಯಲ್ಲಿ ಶೇಕಡಾ 50 ರಷ್ಟು ಹೆಚ್ಚಳವಾಗಿದೆ.ಇನ್ನು ಬೆಂಗಳೂರಿನಲ್ಲಿ ಸಹ ಮೂರು ದಿನಗಳಿಂದ ಬೆಳ್ಳಂಬೆಳಗ್ಗೆ ತುಂತುರ ಮಳೆಯಾಗುತ್ತಿದೆ. ಇದರಿಂದ ಸಿಲಿಕಾನ್ ಸಿಟಿ ಮಂದಿ ಹೈರಾಣಾಗಿದ್ದಾರೆ.