ಬೆಂಗಳೂರು, ಮೈಸೂರು ರಸ್ತೆಯಲ್ಲಿ ಅಗ್ನಿಅವಘಡ: ಪಾರ್ಕ್ ಮಾಡಿದ್ದ 3 ಬಸ್ಸುಗಳು ಭಸ್ಮ

ಬೆಂಗಳೂರು : ಆರ್.ವಿ. ಇಂಜಿಯರಿಂಗ್ ಕಾಲೇಜಿನ ಬಳಿ ಪಾರ್ಕ್ ಮಾಡಿದ್ದ ಮೂರು ಬಸ್ಗಳಿಗೆ ಬೆಂಕಿ ಅವಘಡ ಸಂಭವಿಸಿದ್ದು, ಬೆಂಕಿಯ ಕೆನ್ನಲಿಗೆ ಸಿಲುಕಿ ಬಸ್ಸುಗಳು ಹೊತ್ತಿಉರಿದಿದೆ.ಕೂಡಲೇ ಘಟನಾ ಸ್ಥಳಕ್ಕೆ ಸ್ಥಳೀಯ ಆಗ್ನಿಶಾಮಕ ಸಿಬ್ಬಂದಿಗಳು ಆಗಮಿಸಿ, ಬೆಂಕಿ ನಂದಿಸುವ ಕಾರ್ಯಾಚರಣೆ ಮುಂದುವರಿಸಿದ್ದಾರೆ ̤ ಬೆಂಗಳೂರು, ಮೈಸೂರು ರಸ್ತೆಯಲ್ಲಿ ಅಗ್ನಿಅವಘಡ ಸಂಭವಿಸಿದ್ದು. ಶಾರ್ಟ್ ಸರ್ಕ್ಯೂಟ್ನಿಂದ ಬೆಂಕಿ ಹತ್ತಿಕೊಂಡಿದೆ ಎಂಬ ಮಾಹಿತಿ ಲಭ್ಯವಾಗಿದೆ. ಬಸ್ಸಿನಲ್ಲಿ ಯಾರು ಇರದ ಕಾರಣ ಭಾರೀ ಅನಾಹುತ ತಪ್ಪಿದೆ ಎಂದು ತಿಳಿದುಬಂದಿದೆ.