ಕಾಂಗ್ರೆಸ್​ನವರಿಗೆ ಪಾಪ ನಾಯಕತ್ವದ ಕೊರತೆ ಇದೆ: ಅದು ಬಂಜರು ಭೂಮಿ: ಆರ್‌ ಅಶೋಕ್‌ ವ್ಯಂಗ್ಯ

ಕಾಂಗ್ರೆಸ್​ನವರಿಗೆ ಪಾಪ ನಾಯಕತ್ವದ ಕೊರತೆ ಇದೆ: ಅದು ಬಂಜರು ಭೂಮಿ: ಆರ್‌ ಅಶೋಕ್‌ ವ್ಯಂಗ್ಯ

ಬೆಂಗಳೂರು: ಕಾಂಗ್ರೆಸ್​ನವರಿಗೆ ಪಾಪ ನಾಯಕತ್ವದ ಕೊರತೆ ಇದೆ. ಕಾಂಗ್ರೆಸ್​ ನಾಯಕತ್ವ ಇಲ್ಲದ ಬಂಜರು ಭೂಮಿ. ಕಾಂಗ್ರೆಸ್​ನವರು ಮರುಭೂಮಿಯಲ್ಲಿ ನೀರು ಹುಡುಕುತ್ತಿದ್ದಾರೆ. ಕಾಂಗ್ರೆಸ್​ಗೆ ಅಂತಿಮ ಮೊಳೆ ಹೊಡೆಯುವ ಚುನಾವಣೆ ಇದು ಎಂದು ಆರ್‌ .

ಅಶೋಕ್‌ ಟೀಕೆ ಮಾಡಿದ್ದಾರೆ.
ನಗರದಲ್ಲಿ ಸುದ್ದಿಗೋಷ್ಠಿ ನಡೆಸಿದ ಅವರು,ಮಾರ್ಚ್‌ 3ರಂದು ನನ್ನ ನೇತೃತ್ವದಲ್ಲಿ ವಿಜಯ ಸಂಕಲ್ಪ ರಥಯಾತ್ರೆಗೆ ಅಮಿತ್‌ ಶಾ ಚಾಲನೆ ನೀಡಲಿದ್ದಾರೆ. ದೇವನಹಳ್ಳಿಯ ಆವತಿ ಗ್ರಾಮದ ಚೆನ್ನಕೇಶವ ದೇಗುಲ ಬಳಿ ಚಾಲನೆ ನೀಡಲಾಗುವುದು. ಬಳಿಕ ದೇವನಹಳ್ಳಿಯಲ್ಲಿ ಬೃಹತ್ ಸಮಾವೇಶ ನಡೆಸಲಾಗುವುದು ಹೇಳಿದ್ದಾರೆ.

ರಥಯಾತ್ರೆಯಲ್ಲಿ ಸಚಿವರಾದ ಅಶ್ವತ್ಥ್ ನಾರಾಯಣ, ಗೋಪಾಲಯ್ಯ, ಡಾ.ಸುಧಾಕರ್​​​​​​​​​ ಇರಲಿದ್ದಾರೆ. ಈ ರಥಯಾತ್ರೆ ರಾಮನಗರ, ಚನ್ನಪಟ್ಟಣ, ಕೋಲಾರ, ತುಮಕೂರು, ಚಿತ್ರದುರ್ಗ ಮೂಲಕ ಮಾರ್ಚ್​ 25ಕ್ಕೆ ದಾವಣಗೆರೆ ತಲುಪಲಿದ್ದೇವೆ. ನಂತರ ದಾವಣಗೆರೆಯಲ್ಲಿ ಬೃಹತ್‌ ಸಮಾವೇಶ ನಡೆಯಲಿದ್ದು, ಪ್ರಧಾನಿ ನರೇಂದ್ರ ಮೋದಿ ಸಮಾವೇಶಕ್ಕೆ ಚಾಲನೆ ನೀಡಲಿದ್ದಾರೆ. ಸಾರ್ವಜನಿಕ ಸಭೆಯಲ್ಲಿ 30 ರಿಂದ 40 ಸಾವಿರ ಜನ ಸೇರುತ್ತಾರೆ. ಕರ್ನಾಟಕದಲ್ಲಿ ಡಬಲ್ ಇಂಜಿನ್ ಸರ್ಕಾರ ತರಲು ಮೋದಿ ಕಸರತ್ತು ನಡೆಸಿದ್ದಾರೆ ಎಂದರು.