ಕೊಪ್ಪಳದಲ್ಲಿ ನಿಗೂಢ ಕೊಲೆ ಪ್ರಕರಣ ಭೇದಿಸಿದ ಪೊಲೀಸರು; ಆರೋಪಿಗಳು ಅರೆಸ್ಟ್

ಕೊಪ್ಪಳ: ಒಂದೂವರೆ ತಿಂಗಳ ಬಾಣಂತಿ ಕೊಂದು ಸುಟ್ಟು ಹಾಕಿದ ಪ್ರಕರಣಕ್ಕೆ ಸಂಬಂಧಿಸಿದಂತೆ ನಿಗೂಢ ಪ್ರಕರಣ ಭೇದಿಸುವಲ್ಲಿ ಕೊಪ್ಪಳ ಪೊಲೀಸರು ಯಶಸ್ವಿಯಾಗಿದ್ದಾರೆ.
ತಾಯಿ ಹಾಗೂ ಸಹೋದರನಿಂದಲೇ ನೇತ್ರಾವತಿ ಬರ್ಬರ ಕೊಲೆಯಾಗಿತ್ತು.
ಘಟನೆ ಹಿನ್ನೆಲೆ?
ಕೊಪ್ಪಳದಲ್ಲಿ ಘೋರ ಘಟನೆ ನಡೆದಿದೆ. ನಿಧಿ ಆಸೆಗಾಗಿ ಬಾಣಂತಿಯ ಭೀಕರ ಹತ್ಯೆ ಮಾಡಿರುವ ಘಟನೆ ಕೊಪ್ಪಳ ತಾಲೂಕಿನ ಗಬ್ಬೂರು ಗ್ರಾಮದಲ್ಲಿ ನಡೆದಿದೆ. ಒಂದೂವರೆ ತಿಂಗಳು ಬಾಣಂತಿ 26ವರ್ಷದ ನೇತ್ರಾವತಿ ಕುರಿ ಕೊಲೆ ಮಾಡಲಾಗಿತ್ತು. ಅಮಾವಾಸ್ಯ ಹಿನ್ನೆಲೆ ನಿಧಿಗಾಗಿ ಕೊಲೆ ಮಾಡಿರುವ ಶಂಕೆ ವ್ಯಕ್ತವಾಗಿದೆ. ಮನೆಯ ಸ್ವಲ್ಪ ದೂರದಲ್ಲೇ ಬೆಂಕಿ ಹಚ್ಚಿ ನೇತ್ರಾವತಿ ಕೊಲೆ ಮಾಡಲಾಗಿತ್ತು.