ಕೊಪ್ಪಳದಲ್ಲಿ ನಿಗೂಢ ಕೊಲೆ ಪ್ರಕರಣ ಭೇದಿಸಿದ ಪೊಲೀಸರು; ಆರೋಪಿಗಳು ಅರೆಸ್ಟ್‌

ಕೊಪ್ಪಳದಲ್ಲಿ ನಿಗೂಢ ಕೊಲೆ ಪ್ರಕರಣ ಭೇದಿಸಿದ ಪೊಲೀಸರು; ಆರೋಪಿಗಳು ಅರೆಸ್ಟ್‌

ಕೊಪ್ಪಳ: ಒಂದೂವರೆ ತಿಂಗಳ ಬಾಣಂತಿ ಕೊಂದು ಸುಟ್ಟು ಹಾಕಿದ ಪ್ರಕರಣಕ್ಕೆ ಸಂಬಂಧಿಸಿದಂತೆ ನಿಗೂಢ ಪ್ರಕರಣ ಭೇದಿಸುವಲ್ಲಿ ಕೊಪ್ಪಳ ಪೊಲೀಸರು ಯಶಸ್ವಿಯಾಗಿದ್ದಾರೆ.

ತಾಯಿ ಹಾಗೂ ಸಹೋದರನಿಂದಲೇ ನೇತ್ರಾವತಿ ಬರ್ಬರ ಕೊಲೆಯಾಗಿತ್ತು.

ಇದೀಗ ತಾಯಿ ಕನಕಮ್ಮಕಂಬಳಿ, ಸಹೋದರ ಪ್ರಕಾಶ್‌ ಕಂಬಳಿ ಎಂಬಾತ ನ್ನು ಪೊಲೀಸರು ಬಂಧಿಸಿದ್ದಾರೆ. ಕೌಟುಂಬಿಕ ವಿಚಾರವಾಗಿ ತಾಯಿ ಮತ್ತು ಸಹೋದರ ನೇತ್ರಾವತಿ ಹತ್ಯೆಗೈದಿದ್ದರು. ಮಾರ್ಚ್.‌ 20ರಂದು ಅಮಾವಾಸ್ಯೆ ದಿನವೇ ನೇತ್ರಾವತಿ ಸುಟ್ಟ ಸ್ಥಿತಿಯಲ್ಲಿ ಶವ ಪತ್ತೆಯಾಗಿತ್ತು. ನಿಧಿಗಾಗಿ ನರಬಲಿ ಕೊಡಲಾಗಿ ಎಂದು ಚರ್ಚೆಗೆ ಗ್ರಾಸವಾಗಿತ್ತು. ಇಬ್ಬರು ಸೇರಿ ಬಾಣಂತಿ ಕೊಂದು ಸಾಕ್ಷ್ಯ ನಾಶಕ್ಕಾಗಿ ಶವನನ್ನೇ ಸುಟ್ಟಿದ್ದರು.

ಘಟನೆ ಹಿನ್ನೆಲೆ?

ಕೊಪ್ಪಳದಲ್ಲಿ ಘೋರ ಘಟನೆ ನಡೆದಿದೆ. ನಿಧಿ ಆಸೆಗಾಗಿ ಬಾಣಂತಿಯ ಭೀಕರ ಹತ್ಯೆ ಮಾಡಿರುವ ಘಟನೆ ಕೊಪ್ಪಳ ತಾಲೂಕಿನ ಗಬ್ಬೂರು ಗ್ರಾಮದಲ್ಲಿ ನಡೆದಿದೆ. ಒಂದೂವರೆ ತಿಂಗಳು ಬಾಣಂತಿ 26ವರ್ಷದ ನೇತ್ರಾವತಿ ಕುರಿ ಕೊಲೆ ಮಾಡಲಾಗಿತ್ತು. ಅಮಾವಾಸ್ಯ ಹಿನ್ನೆಲೆ ನಿಧಿಗಾಗಿ ಕೊಲೆ ಮಾಡಿರುವ ಶಂಕೆ ವ್ಯಕ್ತವಾಗಿದೆ. ಮನೆಯ ಸ್ವಲ್ಪ ದೂರದಲ್ಲೇ ಬೆಂಕಿ ಹಚ್ಚಿ ನೇತ್ರಾವತಿ ಕೊಲೆ ಮಾಡಲಾಗಿತ್ತು.