ಮೂಟ್ಟೆ ಯೋಜನೆ ಕೈಬಿಡಿ. ಮೂಟ್ಟೆ ಬಗದೀತು ನಿಮ್ಮ ಹೂಟ್ಟಿ. ದಯಾನಂದ ಸ್ವಾಮಿಜಿ....
ರಾಜ್ಯದ ಶಾಲೆ, ಅಂಗನವಾಡಿಗಳಲ್ಲಿ ಮೊಟ್ಟೆಗೆ ಬದಲಾಗಿ ಸತ್ವಯುತ ಸರ್ವಸಮ್ಮತ ಸಸ್ಯಾಹಾರ ಪದಾರ್ಥ ನೀಡಬೇಕು ಇಲ್ಲವಾದಲ್ಲಿ ರಾಜ್ಯದಾದ್ಯಂತ ಸಸ್ಯಾಹಾರಿಗಳಿಗಾಗಿ ಪ್ರತ್ಯೇಕ ಶಾಲೆ ಹಾಗೂ ಅಂಗನವಾಡಿಗಳನ್ನು ತಲೆಯ ಹಕ್ಕೊತ್ತಾಯಿಸಿ ಎಂದು ಭಾರತ ಸಸ್ಯಾಹಾರಿಗಳ ಒಕ್ಕೂಟ ಪ್ರಧಾನ ಸಂಚಾಲಕರಾದ ದಯಾನಂದ ಸ್ವಾಮಿಜಿ ಹೇಳಿದ್ದಾರೆ. ಧಾರವಾಡದಲ್ಲಿ ಸುದ್ದಿಗೋಷ್ಠಿ ಏರ್ಪಡಿಸಿ ಮಾತನಾಡ ಸ್ವಾಮೀಜಿ ಅವರು. ಮೂಟ್ಟೆ ಬಗದೀತು ನಿಮ್ಮ ಹೂಟ್ಟಿನಾ ಎಂದು ಮುಖ್ಯಮಂತ್ರಿಗಳಿಗೆ ಎಚ್ಚರಿಕೆ ನೀಡುತ್ತಿದ್ದೆನೆ, ಅಲ್ಲದೆ ಸರ್ಕಾರ ಅನುದಾನಿತ ಶಾಲೆ, ಅಂಗನವಾಡಿಗಳಲ್ಲಿನ ಮಕ್ಕಳಿಗೆ ವಿದಾರ್ಥಿಗಳಿಗೆ ಪೌಷ್ಟಿಕಾಂಶದ ಹೆಸರಿನಲ್ಲಿ ಸರ್ಕಾರ ಮೊಟ್ಟೆ ತಿನ್ನಿಸುತ್ತಿರುವುದನ್ನು ಕೈಬಿಟ್ಟು , ಮೊಟ್ಟೆಗಿಂತಲೂ ಅಧಿಕ ಪೋಷಕಾಂಶ ಅಂಶಗಳನ್ನು ಒಳಗೊಂಡ ಸತ್ವಯುತ ಸರ್ವಸಮೃತ ಏಕರೂಪದ ಶುದ್ಧ ಸಸ್ಯಾಹಾರ ಪದಾರ್ಥಗಳನ್ನು ನೀಡಬೇಕು ಎಂದರು...ಸರ್ಕಾರಿ ಅನುದಾನಿತ ಶಾಲೆ, ಅಂಗನವಾಡಿಗಳಿಗೆ ಮೊಟ್ಟೆಯಿಂದ ಮುಕ್ತಗೊಳಿಸಲು ಮೊಟ್ಟೆ - ಕೈಬಿಡಲು ಸರಕಾರಕ್ಕೆ ಸಾಧ್ಯವೇ ಇಲ್ಲ ಎನ್ನುವುದಾದಲ್ಲಿ ರಾಜ್ಯದ ಲಿಂಗಾಯತ ಧರ್ಮ ಜೈನ ಧರ್ಮ ಮುಂತಾದ ಧರ್ಮಗಳ ಮತ್ತು ಬ್ರಾಹ್ಮಣ , ವೈಶ್ಯ ಮುಂತಾದ ಸಮುದಾಯಗಳ , ಸಂಪ್ರದಾಯ , ಸಸ್ಯಾಹಾರ : ಪರವಾದ ಸರ್ವ ಜನಾಂಗಗಳ ಲಕ್ಷಾಂತರ ಮಕ್ಕಳಿಗಾಗಿ ಪ್ರತ್ಯೇಕ ಸಸ್ಯಾಹಾರಿ ಶಾಲೆ ಮತ್ತು ಅಂಗನವಾಡಿಗಳನ್ನು ತೆರೆಯಲು ಹಕ್ಕೊತ್ತಾಯಿಸಿ ಬೆಳಗಾವ ವಿಧಾನ ಮಂಡಲ ಅಧಿವೇಶನದ ಸಂದರ್ಭದಲ್ಲಿ ಇದೆ 20 ರಂದು ಮುಂಜಾನೆಯಿಂದ ಬೆಳಗಾವಿಯ ಸಮಾವೇಶ ಮುಂದೆ ವಿಧಾನಸೌಧ ಚಲೋ ಚಳುವಳಿಯನ್ನು ಹಮ್ಮಿಕೊಳ್ಳಲಾಗಿದೆ ಎಂದರು...