ಬೆಂಗಳೂರು ಬಾರ್‌ನಲ್ಲಿ ಕುಡಿದ ಮತ್ತಿನಲ್ಲಿ ಸಿಬ್ಬಂದಿಗೆ ಹಲ್ಲೆ, ಚಿಕಿತ್ಸೆ ಫಲಿಸದೆ ಸಾವು : ಇಬ್ಬರು ಅರೆಸ್ಟ್‌

ಬೆಂಗಳೂರು ಬಾರ್‌ನಲ್ಲಿ ಕುಡಿದ ಮತ್ತಿನಲ್ಲಿ ಸಿಬ್ಬಂದಿಗೆ ಹಲ್ಲೆ, ಚಿಕಿತ್ಸೆ ಫಲಿಸದೆ ಸಾವು : ಇಬ್ಬರು ಅರೆಸ್ಟ್‌

ಬೆಂಗಳೂರು : ಬಾರ್‌ನಲ್ಲಿ ಎಣ್ಣಿ ಬೇಗಾನೆ ಸಪ್ಲೈ ಮಾಡಿಲ್ಲ ಎಂಬ ಕಾರಣಕ್ಕಾಗಿ ಸಿಬ್ಬಂದಿಗೆ ಹಲ್ಲೆಗೊಂಡ ಸಿಬ್ಬಂದಿ ಚಿಕಿತ್ಸೆ ಫಲಿಸದ ಸಾವನ್ನಪ್ಪಿದ ಘಟನೆ ಬೆಳಕಿಗೆ ಬಂದಿದೆ , ಆರೋಪಿಗಳಿಬ್ಬರನ್ನು ಬಂಧಿಸಲಾಗಿದೆ.

ಬಸವರಾಜು (39) ಮೃತಪಟ್ಟ ಬಾರ್‌ ಸಿಬ್ಬಂದಿ ಎಂದು ಗುರುತಿಸಲಾಗಿದೆ. ಜನವರಿ‌ 23 ರ ಸಂಜೆ ಕೆ.ಎಸ್ ಲೇಔಟ್​ನ ಎಸ್.ಆರ್.ಆರ್ ಬಾರ್​ಗೆ ವಾಟರ್ ಫಿಲ್ಟರ್ ,ವಾಷಿಂಗ್ ಮಷಿನ್ ರಿಪೇರಿ ಕೆಲಸ ಮಾಡ್ತಿದ್ದ ಯುವಕರು ಕುಡಿಯಲು ಬಂದಿದ್ದರು. ಈ ಸಮಯದಲ್ಲಿ ಬಾರ್‌ನಲ್ಲಿ ಬಿಯರ್ ಸಪ್ಲೈ ತಡವಾಗಿದ್ದಕ್ಕೆ ಸಿಬ್ಬಂದಿ ಬಸವರಾಜು ಮೇಲೆ ಸುರೇಶ್, ವಿನೋದ್ ಕುಮಾರ್ ಇಬ್ಬರು ಗಲಾಟೆ ಶುರು ಮಾಡಿ ಹೊರ ನಡೆದಿದ್ದರು.

ಬಳಿ ಸುಮಾರು ನ10 ಗಂಟೆ ಸುಮಾರಿ ಬಾರ್‌ಗೆ ಬಂದು ಮಲಗಿದ್ದಸಿಬ್ಬಂದಿ ಬಸವರಾಜು ತಲೆಯನ್ನು ಗೋಡೆಗೆ ಬಡಿದು ಹಲ್ಲೆನಡೆಸಿದ್ದಾರೆ. ಗಂಭೀರ ಗಾಯಗೊಂಡ ಸಿಬ್ಬಂದಿ ಕೋಮಸ್ಥಿತಿ ಮರಳಿದ್ದು ಚಿಕಿತ್ಸೆ ಫಲಕಾರಿಯಾಗದೆ ಸಾವನ್ನಪ್ಪಿಕೊಂಡಿದ್ದು ವರದಿಯಾಗಿದೆ. ಇದೀಗ ಘಟನೆ ಸಂಬಂಧಿಸಿ ಹಲ್ಲೆಗೈದ ಸುರೇಶ್, ವಿನೋದ್ ಕುಮಾರ್ ಇಬ್ಬರನ್ನು ಕುಮಾರಸ್ವಾಮಿ ಲೇಔಟ್ ಪೊಲೀಸರು ಬಂಧಿದ್ದಾರೆ.