ಆಸ್ಕರ್' ಗೆದ್ದ ಕುವರನಿಗೆ ಅಮಿತ್​ ಶಾ ವಿಶೇಷ ಸನ್ಮಾನ

ಆಸ್ಕರ್' ಗೆದ್ದ ಕುವರನಿಗೆ ಅಮಿತ್​ ಶಾ ವಿಶೇಷ ಸನ್ಮಾನ

ತೆಲುಗಿನ RRR ಸಿನಿಮಾದ 'ನಾಟು ನಾಟು' ಹಾಡನ್ನು 'ಬೆಸ್ಟ್​ ಒರಿಜಿನಲ್ ಸಾಂಗ್'​ ವಿಭಾಗದಲ್ಲಿ ಆಸ್ಕರ್​ ಪ್ರಶಸ್ತಿ ಲಭಿಸಿದೆ. ಇದೇ ಸಂತಸದಲ್ಲಿ ತೆಲುಗು ಮೆಗಾಸ್ಟಾರ್​ ಚಿರಂಜೀವಿ ಹಾಗೂ ಇವರ ಪುತ್ರ ರಾಮ್​ ಚರಣ್​ ಅವರು ಕೇಂದ್ರ ಗೃಹ ಸಚಿವ ಅಮಿತ್​ ಶಾರನ್ನು ಭೇಟಿ ಮಾಡಿದ್ದಾರೆ.ನಿನ್ನೆ ದೆಹಲಿಗೆ ತೆರಳಿದ್ದ ನಟ ರಾಮ್​ ಚರಣ್​ ಹಾಗೂ ಮೆಗಾಸ್ಟಾರ್ ಚಿರಂಜೀವಿ, ಅಮಿತ್​ ಶಾರನ್ನ ಭೇಟಿ ಮಾಡಿದರು. ಈ ವೇಳೆ ಅಮಿತ್​ ಶಾ ಅವರು ತ್ರಿಬಲ್​ R ಸಿನಿಮಾದ 'ನಾಟು ನಾಟು' ಸಾಂಗ್​ಗೆ ಆಸ್ಕರ್​ ಪ್ರಶಸ್ತಿ ಸಂದ ಹಿನ್ನೆಲೆಯಲ್ಲಿ ಕಂಗ್ರಾಟ್ಸ್​ ಹೇಳಿ ಶುಭ ಹಾರೈಸಿದ್ದಾರೆ. ಅಲ್ಲದೇ ನಟ ರಾಮ್​ ಚರಣ್​ಗೆ ವಿಶೇಷವಾದ ಹೂಗುಚ್ಚ ನೀಡಿ, ಗುಲಾಬಿ ಬಣ್ಣದ ರೇಶ್ಮೆ ಶಾಲು ಹೊದಿಸಿ ಅಮಿತ್​ ಶಾ ಅವರು ಸನ್ಮಾನಿಸಿದರು

ನಂತರ ರಾಮ್​ ಚರಣ್​ ಕೂಡ ಕೇಂದ್ರ ಸಚಿವರಿಗೆ ಸನ್ಮಾನಿಸಿದರು. ಇದಕ್ಕೆ ತಂದೆ ಚಿರಂಜೀವಿ ಸಾಥ್​ ನೀಡಿದರು. ಬಳಿಕ ಮೂವರು ಕುಳಿತು ಕೆಲ ಸಮಯ ಸಿನಿಮಾ ಬಗ್ಗೆ ಚರ್ಚೆ ನಡೆಸಿದರು. ಅಮಿತ್ ಶಾ ಅವರು ಹೃದಯ ಪೂರ್ವಕವಾಗಿ ಸ್ವಾಗತಿಸಿ RRR ಸಿನಿಮಾ ಆಸ್ಕರ್​ ವಿನ್​ ಆಗಿದ್ದಕ್ಕೆ ಕಂಗ್ರಾಟ್ಸ್​ ಹೇಳಿದರು ಎಂದು ಚಿರಂಜೀವಿ ಅವರು ತಮ್ಮ ಟ್ವಿಟರ್​ ಅಕೌಂಟ್​ನಲ್ಲಿ ಫೋಟೋ ಶೇರ್​ ಮಾಡಿದ್ದಾರೆ.

ವಿಶೇಷ ಸೂಚನೆ: ಸಿನಿಮಾ ಲೋಕದ ಸ್ಪೆಷಲ್ ಸುದ್ದಿಗಳಿಗಾಗಿ ಪ್ರತಿದಿನ ಸಂಜೆ 5.27ಕ್ಕೆ ನ್ಯೂಸ್‌ ಫಸ್ಟ್‌ ಚಾನೆಲ್​​ನಲ್ಲಿ 'ಚಿತ್ರಪ್ರೇಮಿಗಳೇ' ವೀಕ್ಷಿಸಿ