ಶಿವಮೊಗ್ಗ: ಫೆ.19ರಂದು ನೀರಿನ ಕಂದಾಯ, ಬಾಕಿ ಕರ ವಸೂಲಾತಿಗಾಗಿ ವಿಶೇಷ ಕೌಂಟರ್ ಓಪನ್

ಶಿವಮೊಗ್ಗ : 2022-23 ನೇ ಸಾಲಿನ ನೀರಿನ ಕಂದಾಯ ಮತ್ತು ಬಾಕಿ ಕರ ವಸೂಲಾತಿ ಮಾಡಲು ಶಿವಮೊಗ್ಗ ನಗರ ನೀರು ಸರಬರಾಜು ಮತ್ತು ಒಳಚರಂಡಿ ಮಂಡಳಿ ನಿರ್ವಹಣಾ ವಿಭಾಗ ಮತ್ತು ಉಪವಿಭಾಗ ವತಿಯಿಂದ ಫೆ.19 ರ ಭಾನುವಾರದಂದು ನಗರದ ವಿವಿಧ ಸ್ಥಳಗಳಲ್ಲಿ ವಿಶೇಷ ವಸೂಲಾತಿ ಕೌಂಟರ್ ಗಳನ್ನು ತೆರೆಯಲಾಗುತ್ತದೆ.
ನೀರಿಯ ಖಾತೆದಾರರು ಬಾಕಿ ಉಳಿಸಿಕೊಂಡಿರುವ ನೀರಿನ ಕಂದಾಯವನ್ನು ಪಾವತಿಸದಿದ್ದಲ್ಲಿ ನೀರಿನ ಸಂಪರ್ಕವನ್ನು ಕಡಿತಗೊಳಿಸಲಾಗುವುದು. ಸಾರ್ವಜನಿಕರು ಮಂಡಳಿಯೊಂದಿಗೆ ಸಹಕರಿಸುವಂತೆ ಸಹಾಯಕ ಕಾರ್ಯಪಾಲಕ ಅಭಿಯಂತರರು ತಿಳಿಸಿರುತ್ತಾರೆ.
ವಿಶೇಷ ವಸೂಲಾತಿ ಕೌಂಟರ್ಗಳನ್ನು ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ ಗುರುಪುರ ಮುಖ್ಯರಸ್ತೆ, ಹರಿಗೆ ಗಣಪತಿ ದೇವಸ್ಥಾನದ ಹತ್ತಿರ, ಕಟ್ಟೆ ಸುಬ್ಬಣ್ಣ ಸರ್ಕಲ್ ಕಲ್ಲಹಳ್ಳಿ, ನವುಲೆ ಆಂಜನೇಯಸ್ವಾಮಿ ಆರ್ಚ್ ಹತ್ತಿರ, ಮೋರ್ ಎದುರು ಇನ್ಕಂ ಟ್ಯಾಕ್ಸ್ ಕಚೇರಿ ರಸ್ತೆ ಗೋಪಾಲಗೌಡ ಬಡಾವಣೆ ಶಿವಮೊಗ್ಗ ಈ ಸ್ಥಳಗಳಲ್ಲಿ ತೆರೆಯಲಾಗುವುದು ಎಂದು ಅವರು ತಿಳಿಸಿದ್ದಾರೆ.