ರಾಮನಗರದಲ್ಲಿ ಚಿರತೆ ದಾಳಿ : ಭಯದಿಂದ ಮರವೇರಿದ ಯುವತಿ ಕೆಳಗೆ ಬಿದ್ದು ಗಂಭೀರ ಗಾಯ

ರಾಮನಗರದಲ್ಲಿ ಚಿರತೆ ದಾಳಿ : ಭಯದಿಂದ ಮರವೇರಿದ ಯುವತಿ ಕೆಳಗೆ ಬಿದ್ದು ಗಂಭೀರ ಗಾಯ

ರಾಮನಗರ : ರಾಮನಗರದಲ್ಲಿ ಚಿರತೆ ಹಾವಳಿ ಮಿತಿಮೀರಿದ್ದು, ರಾಮನಗರದಲ್ಲಿ ಯುವತಿ ಮೇಲೆ ಚಿರತೆ ದಾಳಿ ಮಾಡಿದೆ.

ರಾಮನಗರ ಜಿಲ್ಲೆಯ ಮಾಗಡಿ ತಾಲೂಕಿನ ಮರಳುದೇವನಪುರ ಗ್ರಾಮದಲ್ಲಿ ಈ ಘಟನೆ ನಡೆದಿದ್ದು, ಯುವತಿ ವಿಜಯಲಕ್ಞ್ಮಿ (25) ಎಂಬ ಯುವತಿ ಮೇಲೆ ಚಿರತೆ ದಾಳಿ ನಡೆಸಿದೆ.

ದಾಳಿಯಿಂದ ತಪ್ಪಿಸಿಕೊಳ್ಳಲು ಹೋದ ಯುವತಿ ಮರವೇರಿದ್ದಾಳೆ. ಗಾಬರಿಯಿಂದ ಮರ ಏರುವಾಗ ಆಯತಪ್ಪಿ ಕೆಳಗೆ ಬಿದ್ದು ಸೊಂಟ ಮುರಿದುಕೊಂಡಿದ್ದಾಳೆ.

ಚಿರತೆ ದಾಳಿ ಮಾಡುತ್ತಿದ್ದಂತೆ ಯುವತಿ ಕೂಗಿಕೊಂಡಿದ್ದಾಳೆ. ಕೂಡಲೇ ಪಕ್ಕದ ಜಮೀನಿನಲ್ಲಿದ್ದ ಜನರು ಓಡಿ ಬಂದಿದ್ದಾರೆ. ಇದರಿಂದ ಹೆದರಿದ ಚಿರತೆ ಓಡಿಹೋಗಿದೆ. ಘಟನೆ ಹಿನ್ನೆಲೆ ಗ್ರಾಮದ ಜನರು ಬೆಚ್ಚಿಬಿದ್ದಿದ್ದಾರೆ. ಸದ್ಯ, ಗಾಯಾಳುವನ್ನು ಆಸ್ಪತ್ರೆಗೆ ದಾಖಲು ಮಾಡಿ ಚಿಕಿತ್ಸೆ ನೀಡಲಾಗುತ್ತಿದೆ ಎಂದು ತಿಳಿದು ಬಂದಿದೆ.