ಬೆಂಗಳೂರಿನಲ್ಲಿ ಪುಡಿರೌಡಿಗಳ ಅಟ್ಟಹಾಸ: ಎಸ್‍ಎಲ್‍ವಿ ಭವನ ನೆಲಸಮ

ಬೆಂಗಳೂರಿನಲ್ಲಿ ಪುಡಿರೌಡಿಗಳ ಅಟ್ಟಹಾಸ: ಎಸ್‍ಎಲ್‍ವಿ ಭವನ ನೆಲಸಮ

ಬೆಂಗಳೂರು: ಬೆಂಗಳೂರಿನಲ್ಲಿ ದಿನದಿಂದ ದಿನಕ್ಕೆ ಪುಡಿರೌಡಿಗಳ ಹಾವಳಿ ಹೆಚ್ಚಾಗುತ್ತಿದೆ. ರಾತ್ರಿ ಅವಿನ್ಯೂ ರೋಡ್ ನಲ್ಲಿರುವ ಎಸ್‍ಎಲ್‍ವಿ ಭವನವನ್ನು ಪರಿಚಿತ ವ್ಯಕ್ತಿಗಳು ಪುಡಿಗೈದಿರುವ ಘಟನೆ ನಡೆದಿದೆ.

ರಾತ್ರಿ ವೇಳೆ ಸುಮಾರು 30 ಮಂದಿ ಹೋಟೆಲ್‍ಗೆ ಸುತ್ತಿಗೆ ರಾಡ್ ತೆಗೆದುಕೊಂಡು ಬಂದು ಹೋಟೆಲ್ ನೆಲಸಮ ಮಾಡಿದ್ದಾರೆ.

ಮಾಸ್ಕ್ ಮಂಕಿಕ್ಯಾಪ್ ಧರಿಸಿ ಬಂದು 7 ಮಂದಿ ಹೊಟೇಲ್ ಸಿಬ್ಬಂದಿಗೆ ಚಾಕು ತೋರಿಸಿ ಬೆದರಿಕೆ ಹಾಕಿ,ನಂತರ ಅವರಿಂದ ಮೊಬೈಲ್ ಕಿತ್ತುಕೊಂಡಿದ್ದಾರೆ.ಬೆಂಗಳೂರಿನಲ್ಲಿ ತಡರಾತ್ರಿ 1-2 ಗಂಟೆ ವೇಳೆ ಈ ಕೃತ್ಯ ನಡೆದಿದೆ.ಹೋಟೆಲ್ ಗಣೇಶ್ ಮತ್ತು ಮೂರು ಜನ ಪಾರ್ಟ್ ನರ್ ಶಿಪ್ ನಲ್ಲಿ ನಡೆಯುತ್ತಿದೆ. ಜಾಗದ ಮಾಲೀಕತ್ವದ ವಿಚಾರದಲ್ಲಿ ಗಲಾಟೆಯಾಗಿತ್ತು ಎನ್ನಲಾಗಿದ್ದು, ಇದುವೇ ಕೃತ್ಯಕ್ಕೆ ಕಾರಣ ಅಂತ ಹೇಳಲಾಗುತ್ತಿದೆ. ಸದ್ಯ ಘಟನೆಯಿಂದ ಹೋಟೆಲ್ ನಡೆಸುತ್ತಿದ್ದವರು ಕಣ್ಣೀರು ಹಾಕಿದ್ದಾರೆ. ಅನ್ನ ಕೊಡುತ್ತಿದ್ದ ಹೋಟೆಲ್ ನ್ನು ಪುಡಿ ಮಾಡಿದ್ದಾರೆ.ಸುಮಾರು ಹತ್ತು ಲಕ್ಷಕ್ಕಿಂತಲೂ ಹೆಚ್ಚು ನಷ್ಟವಾಗಿದೆ .