ಬಿಎಂಟಿಸಿಯ 94 ಅಧಿಕಾರಿಗಳ ವಿರುದ್ಧ ಲೋಕಾಯುಕ್ತದಲ್ಲಿ ದೂರು

ಬೆಂಗಳೂರು: ಬಿಎಂಟಿಸಿಯಲ್ಲಿ ಹೇಳುವವರು ಇಲ್ಲ ಕೇಳುವವರು ಇಲ್ಲ ಸಾರಿಗೆ ಸಚಿವ ಶ್ರೀ ರಾಮುಲು ಅವರ ಮಾತನ್ನೇ ಕೇಳೋದಿಲ್ಲ ಸಚಿವರ ಮಾತಿಗೂ ಡೊಂಟ್ ಕೇರ್ ಇಲ್ಲಿ ಅಧಿಕಾರಿಗಳು ಆಡಿದ್ದೆ ಆಟ ಹೇಳಿದ್ದೆ ರೂಲ್ಸ್.. ರಜೆ ಬೇಕು ಅಂದ್ರು ದುಡ್ಡು ಡ್ಯೂಟಿ ಬೇಕು ಅಂದ್ರು ದುಡ್ಡು..
ಈ ಬಿಎಂಟಿಸಿ ಒಂಥರ ಭ್ರಷ್ಟರ ಸಂತೆ ಈ ಸಂಸ್ಥೆ ಆರಂಭವಾದಾಗಿನಿಂದ ಒಂದು ರುಪಾಯಿ ಕೂಡ ಲಾಭ ತೋರಿಸಿಲ್ಲ ಪ್ರತಿವರ್ಷ ಕೋಟ್ಯಾಂತರ ರುಪಾಯಿ ನಷ್ಟ ನಷ್ಟ ಆಸ್ತಿ ಅಡವಿಟ್ಟು ಸಾಲ ಮಾಡಿದಾಯ್ತು, ಸರ್ಕಾರದಿಂದ ಅನುದಾನ ಪಡೆದಿದ್ದು ಆಯ್ತು ಆದ್ರು ಪ್ರತಿ ವರ್ಷ ಸಂಸ್ಥೆ ಲಾಸ್ ಕಾರಣ ಇಲ್ಲಿರುವ ಭ್ರಷ್ಟ ಅಧಿಕಾರಿಗಳು ಇಲ್ಲಿ ಏನೇ ಮಾಡಿದ್ರು ಹೇಳೋರು ಇಲ್ಲ ಕೇಳೋರು ಇಲ್ಲ ಇಲ್ಲಿ ಅಧಿಕಾರಿಗಳು ಆಡಿದ್ದೆ ಆಟ ಹೂಡಿದ್ದೆ ಲಗ್ಗೆ..ಬಿಎಂಟಿಸಿಯಲ್ಲಿ ಸುಮಾರು 6600 ಬಸ್ಸುಗಳಿವೆ. 27000 ಸಾವಿರ ಕಂಡಕ್ಟರ್ ಡ್ರೈವರ್ ಗಳಿದ್ದಾರೆ..ಕೊರೊನಾ ಎರಡು ಅಲೆಗಳ ನಂತರ ಪೂರ್ಣ ಪ್ರಮಾಣದಲ್ಲಿ ಬಸ್ಸುಗಳು ಕಾರ್ಯಾಚರಣೆ ಆಗ್ತಿಲ್ಲ ವೋಲ್ವೋ ಬಸ್ಸುಗಳು ನಿಂತಲ್ಲೇ ನಿಂತಿವೆ.. ಸರಿಯಾಗಿ ಬಿಎಂಟಿಸಿ ನೌಕರರಿಗೆ ಡ್ಯೂಟಿ ಸಿಗ್ತಿಲ್ಲ..ಈಗಯಲ್ಲಿ ಹೊಸ ರೂಲ್ಸ್ ತಂದಿದ್ದಾರೆ ಡ್ಯೂಟಿ ಎಷ್ಟು ದಿನಗಳು ಮಾಡಿದ್ರೋ ಅಷ್ಟು ದಿನಗಳದ್ದು ಮಾತ್ರ ಸಂಬಳ ಕೊಡ್ತಾರೆ ಡ್ಯೂಟಿ ಮಾಡಿಲ್ಲ ಅಂದರೆ ಸಂಬಳ ಕೊಡಲ್ಲ.. ಡ್ಯೂಟಿ ಮಾಡಲು ಕಂಡಕ್ಟರ್ ಡ್ರೈವರ್ ಗಳು ಡಿಪೋಗಳಿಗೆ ಪ್ರತಿದಿನ ಬಂದ್ರು ಡಿಪೋ ಮ್ಯಾನೇಜರ್ ಮತ್ತು ಟ್ರಾಫಿಕ್ ಕಂಟ್ರೋಲರ್ ಗಳು ಡ್ಯೂಟಿ ಕೊಡಲ್ಲ ಇದಕ್ಕೆ ಕಾರಣ ಕುರುಡು ಕಾಂಚಾಣ ಹಣ ಕೊಟ್ಟವರಿಗೆ ಮಾತ್ರ ಡ್ಯೂಟಿ ಕೊಡ್ತಾರೆ ಇಲ್ಲಾಂದ್ರೆ ಡ್ಯೂಟಿ ಇಲ್ಲ ಬೆಳಿಗ್ಗೆ ಯಿಂದ ಡಿಪೋಗಳಲ್ಲಿ ಕಾದು ಕಾದು ಮನಗೆ ಹೋಗಬೇಕು.. ಸೋ ಹಾಗಾಗಿ ತಿಂಗಳು ಎರಡರಿಂದ ಮೂರು ಸಾವಿರ ರುಪಾಯಿ ಹಣವನ್ನು ನೀಡಿದ್ರೆ ಡ್ಯೂಟಿ ನೀಡಲಾಗುತ್ತದೆ ಈಗಾಗಲೇ ಹಣ ನೀಡಲು ಒಪ್ಪದೆ ಇದ್ದವರಿಗೆ ಡ್ಯೂಟಿ ನೀಡದೆ ಮಾನಸಿಕವಾಗಿ ತೊಂದರೆ ನಾಲ್ಕರಿಂದ ಐದು ನೌಕರರು ಪ್ರಾಣ ಬಿಟ್ಟಿದ್ದಾರೆ ನಿನ್ನೆ ಆರ್ ಆರ್ ಡಿಪೋ ಕಂಡಕ್ಟರ್