ಗರ್ಭಪಾತಕ್ಕೆ ಅನುಮತಿ ಕೋರಿದ್ದ ವಿದ್ಯಾರ್ಥಿನಿ; ಹೆರಿಗೆ ನಂತ್ರ ಮಗುವನ್ನು ದತ್ತು ನೀಡುವಂತೆ ಸುಪ್ರೀಂ ಸೂಚನೆ

ನವದೆಹಲಿ: ತನ್ನ ಗರ್ಭಪಾತಕ್ಕೆ ಅನುಮತಿ ನೀಡುವಂತೆ ಕೋರ್ಟ್ ಮೆಟ್ಟಿಲೇರಿದ್ದ 20 ವರ್ಷದ ವಿದ್ಯಾರ್ಥಿನಿ ಸಲ್ಲಿಸಿದ್ದ ಅರ್ಜಿ ವಿಚಾರಣೆ ನಡೆಸಿದ ಸುಪ್ರೀಂ, ಹೆರಿಗೆ ಬಳಿಕ ಮಗುವನ್ನು ದತ್ತು ನೀಡಲು ಗುರುವಾರ ನಿರ್ದೇಶಿಸಿದೆ.
20ರ ಹರೆಯದ ಯುವತಿಯ ಕಷ್ಟದ ಬಗ್ಗೆ ತಿಳಿದ ದಂಪತಿಗಳು ಮಗುವನ್ನು ಹೊಂದುವ ಬಯಕೆಯನ್ನು ವ್ಯಕ್ತಪಡಿಸಿದ್ದರು. ಹೀಗಾಗಿ, ಮಗು ಬೇಡವೆಂದಲ್ಲಿ, ಆ ದಂಪತಿಗಳಿಗೆ ಮಗುವನ್ನು ದತ್ತು ನೀಡಬಹುದೆಂದು ಪೀಠ ಹೇಳಿದೆ.
ನ್ಯಾಯಮೂರ್ತಿಗಳಾದ ಪಿ.ಎಸ್.ನರಸಿಂಹ ಮತ್ತು ಜೆ.ಬಿ.ಪರ್ದಿವಾಲಾ ಅವರನ್ನೊಳಗೊಂಡ ಪೀಠವು, ವಿದ್ಯಾರ್ಥಿನಿಗೆ 29 ವಾರಗಳು ತುಂಬಿದ್ದು, ಗರ್ಭಪಾತದಿಂದ ತಾಯಿ-ಮಗುವಿನ ಪ್ರಾಣಕ್ಕೆ ಹಾನಿಯಾಗಬಹುದೆಂದು ಪರಿಗಣಿಸಿ ಗರ್ಭಪಾತವನ್ನು ನಿರಾಕರಿಸಲಾಗಿದ್ದು, ಹೆರಿಗೆ ಬಳಿಕ ಮಗುವನ್ನು ದತ್ತು ನೀಡಬಹುದೆಂದು ಹೇಳಿದೆ.
ಆದ್ರೆ, ಸಂತ್ರಸ್ತೆಯಿಂದ ಯಾವುದೇ ಸುಲ್ಕ ಸ್ವೀಕರಿಸದ, ಆಕೆಗೆ ಎಲ್ಲಾ ಸೌಲಭ್ಯವನ್ನು ಒದಗಿಸಿಕೊಡಬೇಕು ಹಾಗೂ ಈ ಗೌಪ್ರತೆಯನ್ನು ಕಾಪಾಡಿಕೊಳ್ಳಬೇಕು ಎಂದು AIIMS(All India Institute Of Medical Sciences) ನಿರ್ದೇಶಕರಿಗೆ ಸೂಚಿಸಿದೆ.
ತಾಯಿ ಮತ್ತು ಭ್ರೂಣದ ಸುರಕ್ಷತೆ ಮತ್ತು ಆರೋಗ್ಯದ ಹಿತದೃಷ್ಟಿಯಿಂದ ಎಲ್ಲಾ ಅಗತ್ಯ ಮುನ್ನೆಚ್ಚರಿಕೆಗಳನ್ನು ತೆಗೆದುಕೊಳ್ಳುವಂತೆ ನ್ಯಾಯಾಲಯವು AIIMS ಗೆ ಆದೇಶಿಸಿತು. ಇದರಿಂದಾಗಿ ಹೆರಿಗೆಗೆ ಸೂಕ್ತವಾದ ದಿನಾಂಕವನ್ನು ನಿಗದಿಪಡಿಸಬಹುದು.
20ರ ಹರೆಯದ ಯುವತಿಯ ಕಷ್ಟದ ಬಗ್ಗೆ ತಿಳಿದ ದಂಪತಿಗಳು ಮಗುವನ್ನು ಹೊಂದುವ ಬಯಕೆಯನ್ನು ವ್ಯಕ್ತಪಡಿಸಿದ್ದರು. ಹೀಗಾಗಿ, ಮಗು ಬೇಡವೆಂದಲ್ಲಿ, ಆ ದಂಪತಿಗಳಿಗೆ ಮಗುವನ್ನು ದತ್ತು ನೀಡಬಹುದೆಂದು ಪೀಠ ಹೇಳಿದೆ.
ನ್ಯಾಯಮೂರ್ತಿಗಳಾದ ಪಿ.ಎಸ್.ನರಸಿಂಹ ಮತ್ತು ಜೆ.ಬಿ.ಪರ್ದಿವಾಲಾ ಅವರನ್ನೊಳಗೊಂಡ ಪೀಠವು, ವಿದ್ಯಾರ್ಥಿನಿಗೆ 29 ವಾರಗಳು ತುಂಬಿದ್ದು, ಗರ್ಭಪಾತದಿಂದ ತಾಯಿ-ಮಗುವಿನ ಪ್ರಾಣಕ್ಕೆ ಹಾನಿಯಾಗಬಹುದೆಂದು ಪರಿಗಣಿಸಿ ಗರ್ಭಪಾತವನ್ನು ನಿರಾಕರಿಸಲಾಗಿದ್ದು, ಹೆರಿಗೆ ಬಳಿಕ ಮಗುವನ್ನು ದತ್ತು ನೀಡಬಹುದೆಂದು ಹೇಳಿದೆ.
ಆದ್ರೆ, ಸಂತ್ರಸ್ತೆಯಿಂದ ಯಾವುದೇ ಸುಲ್ಕ ಸ್ವೀಕರಿಸದ, ಆಕೆಗೆ ಎಲ್ಲಾ ಸೌಲಭ್ಯವನ್ನು ಒದಗಿಸಿಕೊಡಬೇಕು ಹಾಗೂ ಈ ಗೌಪ್ರತೆಯನ್ನು ಕಾಪಾಡಿಕೊಳ್ಳಬೇಕು ಎಂದು AIIMS(All India Institute Of Medical Sciences) ನಿರ್ದೇಶಕರಿಗೆ ಸೂಚಿಸಿದೆ.
ತಾಯಿ ಮತ್ತು ಭ್ರೂಣದ ಸುರಕ್ಷತೆ ಮತ್ತು ಆರೋಗ್ಯದ ಹಿತದೃಷ್ಟಿಯಿಂದ ಎಲ್ಲಾ ಅಗತ್ಯ ಮುನ್ನೆಚ್ಚರಿಕೆಗಳನ್ನು ತೆಗೆದುಕೊಳ್ಳುವಂತೆ ನ್ಯಾಯಾಲಯವು AIIMS ಗೆ ಆದೇಶಿಸಿತು. ಇದರಿಂದಾಗಿ ಹೆರಿಗೆಗೆ ಸೂಕ್ತವಾದ ದಿನಾಂಕವನ್ನು ನಿಗದಿಪಡಿಸಬಹುದು.