ಬಿಜೆಪಿಗೆ ಬೆಂಬಲ; 12 ಕ್ಷೇತ್ರಕ್ಕೆ ಅರ್‌ಪಿಐ ಕೋರಿಕೆ: ವೆಂಕಟಸ್ವಾಮಿ

ಬಿಜೆಪಿಗೆ ಬೆಂಬಲ; 12 ಕ್ಷೇತ್ರಕ್ಕೆ ಅರ್‌ಪಿಐ ಕೋರಿಕೆ: ವೆಂಕಟಸ್ವಾಮಿ

ಮೈಸೂರು: 'ಕರ್ನಾಟಕದಲ್ಲಿ ಬಿಜೆಪಿ ಬೆಂಬಲಿಸಿ ಚುನಾವಣೆ ಎದುರಿಸಲು ರಿಪಬ್ಲಿಕನ್‌ ಪಾರ್ಟಿ ಆಫ್‌ ಇಂಡಿಯಾ (ಅಠವಳೆ) ನಿರ್ಧರಿಸಿದ್ದು, 10ರಿಂದ 12 ಸ್ಥಾನಗಳಿಗೆ ಬೇಡಿಕೆ ಮುಂದಿಟ್ಟಿದೆ' ಎಂದು ಪಕ್ಷದ ರಾಷ್ಟ್ರೀಯ ಕಾರ್ಯಾಧ್ಯಕ್ಷ ಡಾ.ಎಂ.ವೆಂಕಟಸ್ವಾಮಿ ಹೇಳಿದರು.

ಶನಿವಾರ ಸುದ್ದಿಗೋಷ್ಠಿಯಲ್ಲಿ ಅವರು, ರಾಜ್ಯವನ್ನು ಕಾಂಗ್ರೆಸ್‌ ಮುಕ್ತಗೊಳಿಸುವುದು ನಮ್ಮ ಗುರಿ. 12 ಸ್ಥಾನಕ್ಕೆ ಬೇಡಿಕೆ ಇದ್ದು, ಬಿಜೆಪಿ ಜೊತೆ ಪಕ್ಷದ ಅಧ್ಯಕ್ಷ ರಾಮದಾಸ್‌ ಅಠವಳೆ ನೇತೃತ್ವದಲ್ಲಿ ಚರ್ಚೆ ನಡೆದಿದೆ' ಎಂದರು.