ಕೋವಿಡ್ ಹೆಸರಲ್ಲಿ'ಪಂಚರತ್ನ ರಥಯಾತ್ರೆ' ತಡೆಯಲು ಹುನ್ನಾರ; ಎಚ್.ಡಿ.ಕೆ.

ಮಂಡ್ಯ: ಪಂಚರತ್ನ ಯಾತ್ರೆಯ ಯಶಸ್ಸನ್ನು ಸಹಿಸಲಾಗದೆ ಯಾತ್ರೆ ತಡೆಯುವ ಹುನ್ನಾರ ಕೇಶವ ಕೃಪಾದಲ್ಲಿ ನಡೆಯುತ್ತಿದೆ ಎಂದು ಮಾಜಿ ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ಆರೋಪಿಸಿದರು. ಕೋವಿಡ್ ವಿಚಾರದಲ್ಲಿ ಸರಕಾರದೊಂದಿಗೆ ಸಹಕರಿಸಲು ತಯಾರಿದ್ದೇವೆ. ಆದರೆ ಮಾಹಿತಿ ಪ್ರಕಾರ ಪಂಚರತ್ನ ಯಾತ್ರೆಯಲ್ಲಿ ಜನ ಸೇರುತ್ತಿರುವುದು ಕೆಲವರಿಗೆ ಭಯವಾಗಿದೆ. ಹೀಗಾಗಿ ಯಾತ್ರೆ ತಡೆಯುವ ಹುನ್ನಾರ ಮಾಡಲಾಗುತ್ತಿದೆ ಎಂದರು.