ಚುನಾವಣೆಗೆ ಯಡಿಯೂರಪ್ಪ ಲಿಂಗಾಯುತ ಮತಗಳಿಗಾಗಿ ಚೆನ್ನಾಗಿ ಬಳಸಿಕೊಳ್ಳುತ್ತಾರೆ: ಬಿ.ಕೆ ಹರಿಪ್ರಸಾದ್‌

ಚುನಾವಣೆಗೆ ಯಡಿಯೂರಪ್ಪ ಲಿಂಗಾಯುತ ಮತಗಳಿಗಾಗಿ ಚೆನ್ನಾಗಿ ಬಳಸಿಕೊಳ್ಳುತ್ತಾರೆ: ಬಿ.ಕೆ ಹರಿಪ್ರಸಾದ್‌

ಬೆಂಗಳೂರು: ವಿಧಾನಸಭೆ ಚುನವಾಣೆ ಹತ್ರ ಬರುತ್ತಿದೆ.ಹೀಗಾಗಿ ಯಡಿಯೂರಪ್ಪ ಲಿಂಗಾಯುತ ಮತಗಳಿಗಾಗಿ ಚೆನ್ನಾಗಿ ಬಳಸಿಕೊಳ್ಳುತ್ತಾರೆ. ಕಾಮಧೇನು ರೀತಿಯಲ್ಲಿ ಹಿಂಡಿ ಮನೆಗೆ ಕಳುಹಿಸುತ್ತಾರೆ ಎಂದು ಕಾಂಗ್ರೆಸ್‌ ಬಿ.ಕೆ ಹರಿಪ್ರಸಾದ್‌ ಹೇಳಿದ್ದಾರೆ.

ಎಲ್‌ ಕೆ ಆಡ್ವಾಣಿ , ಮುರುಳಿ ಮನೋಹರ ಜೋಶಿ, ಅರುಣ ಶೌರಿ ಅವರಿಗೆ ವಯಸ್ಸು ಆಗಿದೆ ಎಂದು ಮಾರ್ಗದರ್ಶಕ ಮಂಡಳಿಗೆ ಕಳಿಸಿದ್ದಾರೆ. ಯಡಿಯೂರಪ್ಪ ಅವರು ಲಿಂಗಾಯತರ ಮಹಾನಾಯಕ ಎಂಬ ಕಾರಣಕ್ಕಾಗಿ ಸ್ವಲ್ಪ ಮಟ್ಟಿಗೆ ಜತೆಯಲ್ಲಿ ಇಟ್ಟುಕೊಂಡಿದ್ದಾರೆ. ಅವರನ್ನು ಇಟ್ಟುಕೊಳ್ಳಬೇಕೋ ಬೇಡವೋ ಎಂಬ ಅಡ ಕತ್ತರಿಯಲ್ಲಿ ಬಿಜೆಪಿ ಬಿದ್ದಿದೆ.

ಇನ್ನು ಕೆಲವೇ ಸಮಯದಲ್ಲಿ ಯಡಿಯೂರಪ್ಪ ಅವರನ್ನು ಕೂಡ ಮಾರ್ಗದರ್ಶಕ ಮಂಡಳಿಗೆ ಕಳುಹಿಸುವುದರಲ್ಲಿ ಸಂಶಯವಿಲ್ಲ ಎಂದಿದ್ದಾರೆ.
ಆವತ್ತು ಬಿ.ಎಸ್‌ ಯಡಿಯೂರಪ್ಪ ಅವರ ಮೇಲೆ ಇಡಿ ದಾಳಿ ಮಾಡಿಸಿದ್ದರು ಸಿಎಂ ಸ್ಥಾನದಿಂದ ಯಾಕೆ ಇಳಿಸಿದರು ಎಂದು ನರೇಂದ್ರ ಮೋದಿ, ಅಮಿತ್‌ ಶಾ ಹೇಳಬೇಕು ಎಂದು ಹೇಳಿದ್ದಾರೆ