ಕುತೂಹಲ ಮೂಡಿಸಿದ ಕೆಸಿಎನ್​​-ಅಮಿತ್​ ಷಾ ಭೇಟಿ

ಕುತೂಹಲ ಮೂಡಿಸಿದ ಕೆಸಿಎನ್​​-ಅಮಿತ್​ ಷಾ ಭೇಟಿ

ದೆಹಲಿ: ರಾಜ್ಯ ವಿಧಾನಸಭೆ ಚುನಾವಣೆಗೆ ಇನ್ನೇನು ಕೆಲವು ದಿನಗಳು ಬಾಕಿ ಇರುವ ಬೆನ್ನಲ್ಲೇ ಪಕ್ಷಾಂತರ ಪರ್ವ ಜೋರಾಗಿದೆ.

ಇನ್ನು ಸಚಿವ ಕೆ.ಸಿ.ನಾರಾಯಣಗೌಡ ಬಿಜೆಪಿ ತೊರೆದು ಕಾಂಗ್ರೆಸ್​ ಸೇರುತ್ತಾರೆ ಎಂಬ ವದಂತಿ ಹಿನ್ನಲೇ ಕೇಂದ್ರ ಗೃಹ ಸಚಿವ ಅಮಿತ್​ ಷಾ ಅವರನ್ನು ಭೇಟಿ ಮಾಡಿ ಮಾತುಕತೆ ನಡೆಸಿದ್ದಾರೆ.

ಬುಧವಾರ ಮಾಜಿ ಸಿಎಂ ಬಿ.ಎಸ್​.ಯಡಿಯೂರಪ್ಪರನ್ನು ಭೇಟಿ ಮಾಡಿ ಮಾತುಕತೆ ನಡೆಸಿದ್ದ ಕೆಸಿಎನ್​​ಗೆ ಪಕ್ಷ ಬಿಡದಂತೆ ತಿಳಿ ಹೇಳಲಾಗಿತ್ತು.

ಇಂದು ನಾರಾಯಣ ಗೌಡರನ್ನು ದೆಹಲಿಗೆ ಕರೆಸಿಕೊಂಡಿದ್ದ ಅಮಿತ್​ ಷಾ ಪಕ್ಷ ತೊರೆಯದಂತೆ ಸೂಚನೆ ನೀಡಿದ್ದಾರೆ. ಪಕ್ಷದ ನಾಯಕರ ಸೂಚನೆಯಂತೆ ಬಿಜೆಪಿಯಲ್ಲೇ ಉಳಿಯಲು ಕೆಸಿಎನ್​ ನಿರ್ಧರಿಸಿದ್ದಾರೆ ಎಂದು ತಿಳಿದು ಬಂದಿದೆ.